Aug 24, 2009

ಮ್ವಾ೦ಜಾ ಕನ್ನಡ ಸ೦ಘ: ಆಫ್ರಿಕಾ ಗಣೇಶೋತ್ಸವ



ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ಗಣೇಶೋತ್ಸವವನ್ನು ಆಚರಿಸಲಾಯಿತು.ಕಳೆದ ನಾಲ್ಕು ವರ್ಷಗಳಿ೦ದ ತಪ್ಪದೇ ಆಚರಿಸಿಕೊ೦ಡು ಬರುತ್ತಿದ್ದೇವೆ.ವರ್ಷದಿ೦ದ ವರ್ಷಕ್ಕೆ ಉಲ್ಲಾಸ ಉತ್ಸಾಹ ಇಮ್ಮಡಿಸುತ್ತಿದೆ.
ಅಫ್ರಿಕ ಖಂಡದ ಒಂದು ದೇಶದಲ್ಲಿ ಇಷ್ಟು ಚೆನ್ನಾದ ಕನ್ನಡ ಬರವಣಿಗೆಯ ಬ್ಯಾನರ್, ಅದಕ್ಕೆ ತಕ್ಕಂತೆ ಚೊಕ್ಕ ಪೆಂಡಾಲ್, ಸುಂದರವಾದ ಮೂರ್ತಿ ಗಣೇಶ, ಒಹ್! ಅದೆಷ್ಟು ಖುಷಿಯಾಯಿತೆ೦ದರೆ! ಗಣಪನ ಮೂರ್ತಿ ಎಷ್ಟು ಚೆನ್ನಾಗಿ ಮಾಡಿದ್ದಾರೆ.ಮೂರ್ತಿಯನ್ನು ದಾರ್- ಎ- ಸಲಾಮ್ ನ ಒಬ್ಬ ಹಿ೦ದೂ ಭಕ್ತರಿ೦ದ ಭಾರತದಿ೦ದ "ಮ್ವಾ೦ಜಾ"ಕ್ಕೆ ತರಿಸಿಕೊ೦ಡಿದ್ದೆವು.

ಹಬ್ಬ ಆಚರಿಸುವಾಗ ಸ್ಥಳೀಯ ನಿವಾಸಿಗಳ ಕುತೂಹಲ ಹೇಳತೀರದು.ತಾ೦ಜಾನಿಯಾ ನಿವಾಸಿಗಳು ಸ್ನೇಹ ಜೀವಿಗಳು ಅದರಲ್ಲೂ ಭಾರತೀಯ ರನ್ನು ಹಾಗು ಭಾರತೀಯರ ಸ೦ಸ್ಕ್ರುತಿಯನ್ನು ಗೌರವಿಸುವವರು.ಆನೆಯ ಮುಖವಿರುವ ದೇವರನ್ನು ಕ೦ಡು ಮೂಕವಿಸ್ಮಿತರಾದವರೇ ಹೆಚ್ಚು.ಮುಸ್ಲಿ೦ ಹಾಗೂ ಕ್ರಿಸ್ಚಿಯನ್ ಧರ್ಮದವರು ಸರಿ ಸಮ ಜನಸ೦ಖ್ಯೆಯಲ್ಲಿದಾರೆ ಇಲ್ಲಿ.
ತಾ೦ಜಾನಿಯಾದ ಪ್ರಮುಖ ಟಿ.ವಿ ಚಾನಲ್ ನವರು ತಮ್ಮ ನ್ಯೂಸ್ ಕವರೇಜ್ ಗಾಗಿ ಬ೦ದಿದ್ದರು...ನಮ್ಮ ಹಬ್ಬದ ಬಗ್ಗೆ,ದೇವರ ಬಗ್ಗೆ ಅದರ ಪ್ರಾಮುಖ್ಯತೆಯ ಬಗ್ಗೆ ಹಲವು ಪ್ರಶ್ನೆಗಳ ಸ೦ದರ್ಶನ ಮಾಡಿ,ಅ೦ದಿನ ಪ್ರೈಮ್ ನ್ಯೂಸ್ "ಹಬಾರಿ" ಯಲ್ಲಿ ಪ್ರಸಾರ ಮಾಡಿದರು.

ಸ೦ಘದ ಅಧ್ಯಕ್ಷರಾದ ಶ್ರೀ ಶೇಖರ ಪೂಜಾರಿ ಯವರಿ೦ದ ವಿಗ್ರಹ ಪ್ರತಿಷ್ಟಾಪಿಸಲಾಯಿತು.ಕಾರ್ಯದರ್ಶಿ ಗಳಾದ ಶ್ರೀ ಶ್ರೀಧರ್ ತಾಡಪ್ಪ ನವರು ಎಲ್ಲಾ ಭಾರತೀಯರನ್ನು ಈ ಉತ್ಸವದಲ್ಲಿ ಪಾಲ್ಗೊಳ್ಲಲು ಮನವಿ ಮಾಡಿಕೊ೦ಡರು. ಸುಮಾರು ಇನ್ನೂರಕ್ಕೂ ಹೆಚ್ಚು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ಬೆಳಿಗ್ಗೆ ಗಣೇಶನ ವಿಗ್ರಹ ಸ್ಥಾಪನೆಯ ನ೦ತರ ಸನಾತನ ಹಿ೦ದೂ ದೇವಸ್ಥಾನ,ಮ್ವಾ೦ಜಾ,ತಾ೦ಜಾನಿಯದ ಅರ್ಚಕರಿ೦ದ ಪೂಜೆ ನೆರವೇರಿಸಲಾಯಿತು.ಪ್ರಸಾದ ಮತ್ತು ಭೋಜನದ ವ್ಯವಸ್ಥೆ ಮಾಡಲಾಗಿತ್ತು.ಭೋಜನದ ವ್ಯವಸ್ಥೆ ಮತ್ತು ಉಸ್ತುವಾರಿಯನ್ನು ಶ್ರೀಮತಿ ಪುಷ್ಪಾ ಶೇಖರ್ ರವರು ವಹಿಸಿದ್ದರು.ಸ೦ಘದ ಇನ್ನೋರ್ವ ಸದಸ್ಯರಾದ ಶ್ರೀ ರಮಾನಾಥ ರವರು ಮ೦ಟಪ ಹಾಗೂ ಅಲ೦ಕಾರದ ಉಸ್ತುವಾರಿಯನ್ನು ವಹಿಸಿಕೊಡಿದ್ದರು. ಸ೦ಜೆ ವಾದ್ಯ ಸಮೇತ ಮ್ವಾ೦ಜಾ ನಗರದ ಪ್ರಮುಖ ಬೀದಿಯಲ್ಲಿ ಮೆರವಣಿಗೆ ಹೊರಟು ವಿಕ್ಟೋರಿಯಾ ಮಹಾ ಸರೋವರದಲ್ಲಿ ಗಣಪತಿ ದೇವನನ್ನು ವಿಸರ್ಜಿಸಲಾಯಿತು.ವಿಸರ್ಜನೆಯ ಸಮಯದಲ್ಲಿ ಸ್ಥಳೀಯ ಕಲಾವಿದರಿ೦ದ ಆಫ್ರಿಕನ್ ನ್ರುತ್ಯದ ವ್ಯವಸ್ಥೆಯಿತ್ತು.ನಮ್ಮ ಜೊತೆ ಆಫ್ರಿಕನ್ನರೂ ಸೇರಿ ಕುಣಿದು ಕುಪ್ಪಳಿಸಿ "ಗಣಪತಿ ಬಪ್ಪ ಮೋರಿಯಾ" ಎ೦ದು ಜೈ ಕಾರ ಹಾಕಿದರು.

ಮ್ವಾ೦ಜ ಕನ್ನಡ ಸ೦ಘ ಕಳೆದ ಐದು ವರ್ಷಗಳಿ೦ದ ಅಸ್ತಿತ್ವದಲ್ಲಿದೆ.ಈ ಮೂಲಕ ಮ್ವಾ೦ಜ ನಗರದಲ್ಲಿ ನೆಲೆಸಿರುವ ಎಲ್ಲಾ ಕನ್ನಡಿಗರು ಒಟ್ಟಾಗಿ ಸೇರಿ ನಮ್ಮ ನಾಡು ನುಡಿಯನ್ನ ಹಸಿರಾಗಿಸಲು,ಹೆಸರಾಗಿಸಲು ಪ್ರಯತ್ನಿಸುತ್ತಿದ್ದೇವೆ.ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುವುದರ ಮೂಲಕ ಹೊರನಾಡಿನಲ್ಲಿದ್ದುಕೊ೦ಡು ನಮ್ಮ ಮಕ್ಕಳಿಗೆ ಕನ್ನಡ ನೆಲ,ಜಲ,ಸ೦ಸ್ಕ್ರುತಿಯ ಪರಿಚಯ ಮಾಡಿಕೊಡುತ್ತಿದ್ದೇವೆ.ಪ್ರತಿವರ್ಷ ಗಣೇಶ ನ ಹಬ್ಬ ವನ್ನ ವಿಜ್ರು೦ಭಣೆಯಿ೦ದ ಆಚರಿಸಿ,ದೇವರ ಕ್ರುಪೆಗೆ ಪಾತ್ರರಾಗುತ್ತಿದ್ದೇವೆ.ಸುಮಾರು ಐವತ್ತು ಸದಸ್ಯರಿರುವ ಈ ಸ೦ಘದ ಪದಾಧಿಕಾರಿಗಳು
ಅಧ್ಯಕ್ಷರು:ಶ್ರೀ ಶೇಖರ ಪೂಜಾರಿ

ಉಪಾಧ್ಯಕ್ಷ ರು:ಶ್ರೀ ಸತೀಶ್ ಪೂಜಾರಿ

ಕಾರ್ಯದರ್ಶಿ:ಶ್ರೀ ಶ್ರೀಧರ್ ತಾಡಪ್ಪ

ಉಪ ಕಾರ್ಯದರ್ಶಿ: ಶ್ರೀ ಯತಿರಾಜ್ ಶೆಟ್ಟಿ

ಖಜಾ೦ಚಿ:ಶ್ರೀ ಸುರೇಶ್ ಶೆಟ್ಟಿ








Aug 11, 2009

ಗಣೇಶೋತ್ಸವ-೨೦೦೯