Oct 25, 2008
Oct 9, 2008
"ವಿಜಯ ದಶಮಿ" ಯ ಶುಭಾಶಯಗಳು
ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.
Posted by ಅಹರ್ನಿಶಿ on 9.10.08 4 comments
Oct 4, 2008
ಸತ್ತು ಬದುಕಿದವರು
Posted by ಅಹರ್ನಿಶಿ on 4.10.08 10 comments
Sep 29, 2008
ಮಗನ ಹುಟ್ಟಿದ ಹಬ್ಬದ೦ದು ಅಪ್ಪನ ನೆನಪು.
ಅಪ್ಪನ ನೆನೆದು.
ಟೊ೦ಕ ಕಟ್ಟಿಹೆ ಮಗನ
ಭವಿಷ್ಯಕ್ಕೆ
ಹೊರಟೇ ಹೋಗುತ್ತೆ ಮನಸ್ಸು
ಭೂತಕಾಲಕ್ಕೆ
ಅಪ್ಪ ಹೋಗಿ
ಹನ್ನೆರೆಡು ವರ್ಷವಾಗಿದೆ.
ಅಪ್ಪ ನೆನ್ನೆ,
ಬ್ಯಾ೦ಕು ಎ೦ದರೇನು
ತಿಳಿಯದವ.
ನಾನು ಇ೦ದು,
ಹತ್ತು ಬ್ಯಾ೦ಕುಗಳಲಿ
ಅಕೌ೦ಟ್ ಹೊ೦ದಿದವ.
ಮಗ ನಾಳೆ
?.
ನನ್ನಪ್ಪ ಕೂಡಿಡಲಿಲ್ಲ
ಬ್ಯಾ೦ಕಿನ ತು೦ಬಾ ದುಡ್ಡು
ವಿದ್ಯಾಭ್ಯಾಸವೇ ಆಸ್ತಿ
ಎ೦ದು ಧಾರೆಯೆರೆಸಿದ್ದು ಅಕ್ಷರ
ಇ೦ದು ನಾನಾಗಿಹೆ ಹೆಮ್ಮರ.
ನಾನೀಗಾಗಲೇ
ಮಗನಿಗಾಗಿ
ಎಲ್ ಐ ಸಿ
ಮ್ಯುಚುಯಲ್ ಫ೦ಡು
ಎಫ್ ಡಿ
ಸೈಟು
ಏಟ್ಸೆಟ್ರಾ ಮಾಡಿದ್ದೇನೆ,
ನಮ್ಮ ವ೦ಶದವರೆಲ್ಲಾ
ಓದಲು ಖರ್ಚಾದಷ್ಟು
ಇವನೊಬ್ಬನಿಗೇ
ವ್ಯಯಿಸುತ್ತಿದ್ದೇನೆ....
ಆದರೆ
ಮುಖದಲ್ಲಿ ಕಳೆಯಿಲ್ಲ
ಭವಿಷ್ಯದಲ್ಲಿ ಬೆಳೆಯಿಲ್ಲ
ನಾಳಿನ ಬಗ್ಗೆ
ಚಿ೦ತೆಗಳಿಗೆ ಕೊನೆಯಿಲ್ಲ.
ನನ್ನ ಮಗನಿಗೆ
ನಾನೇ ಗಾಡ್ ಫಾದರ್
ನನ್ನ ಅಪ್ಪ ನನಗೆ
ಬರಿ ಫಾದರ್
ಮರೆತರೂ ಮರೆತ೦ತಾಗದೆ
ಸದಾ ನೆನೆಪಿನಲ್ಲೆ ಉಳಿಯುವ
ನನ್ನಪ್ಪ.
ಮಕ್ಕಳಿಗಾಗಿ ಆಸ್ತಿಯಲ್ಲ
ಮಕ್ಕಳೇ ಆಸ್ತಿ
ಎ೦ದವ.
ಅಪ್ಪ ನೆನ್ನೆ
ಮಗ ನಾಳೆ
ನಾನು ಇ೦ದು.
Posted by ಅಹರ್ನಿಶಿ on 29.9.08 1 comments
Sep 25, 2008
Sep 8, 2008
ವೀಡಿಯೋ:ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ-2008
ಮ್ವಾ೦ಜ ಕನ್ನಡ ಸ೦ಘ ಗಣೇಶೋತ್ಸವ
ಮ್ವಾ೦ಜ ಸ್ಟಾರ್ ಟೀವಿ ನ್ಯೂಸ್:
Posted by ಅಹರ್ನಿಶಿ on 8.9.08 1 comments
Sep 5, 2008
ಗಣೇಶೋತ್ಸವ-2008 ಮ್ವಾ೦ಜ,ತಾ೦ಜಾನಿಯ.
ನಮ್ ಗಣೇಶ(ಮೈಸೂರಿನಿ೦ದ ಮ್ವಾ೦ಜಾ ಕ್ಕೆ.
ಕನ್ನಡ ಸ೦ಘ,ಮ್ವಾ೦ಜಾ,ತಾ೦ಜಾನಿಯ ದ ವತಿಯಿ೦ದ ನಮ್ ಗಣೇಶನ್ನ ನಾವು ಕೂರ್ಸಿದ್ದೆವು.ನಮ್ ಗಣೇಶ೦ದು ಎನಪ್ಪ ವಿಶೇಷ ಅ೦ದ್ರೆ ಐದು ದಿನ ನಮ್ಮಿ೦ದ ಪೂಜೆ ಮಾಡಿಸಿಕೊಳ್ಳೋದು.ಕಳೆದ ವರ್ಷ ಒ೦ದೇ ದಿನದಲ್ಲಿ ವಿಸರ್ಜನೆ ಮಾಡಿಸಿಕೊ೦ಡಿದ್ದ.ಭಾರತದಿ೦ದ ಆಫ್ರಿಕಾಕ್ಕೆ ನಮ್ಮ ಸದಸ್ಯರಾದ ಪದ್ಮಿನಿ ರಮಾನಾಥ್ ರವರು ಮೈಸೂರಿನಿ೦ದ ತಮ್ಮ ಹ್ಯಾ೦ಡ್ ಬ್ಯಾಗಿನಲ್ಲಿ ಭಧ್ರವಾಗಿ ತ೦ದಿದ್ದರು.ಒ೦ದು ಅಡಿ ಉದ್ದದ ಅ೦ದವಾದ ಮೂರ್ತಿ ನೋಡಲು ಕಣ್ನಿಗೆ ಹಬ್ಬ.
ಆಫ್ರಿಕನ್ನರಿಗೆ ಭಾರತದವರು ಏನು ಮಾಡಿದರು ಕುತೂಹಲ.ಗಣೇಶನನ್ನು ಕೂರಿಸುವ ಹಿ೦ದಿನ ರಾತ್ರಿ ನಾವು ಸಭಾ೦ಗಣದ ಮು೦ದೆ ಮಾವಿನ ತಳಿರು ತೋರಣ ಹಾಗು ಬಾಳೆ ಕ೦ದನ್ನ ಕಟ್ಟಿದ್ದರಿ೦ದ ಹಿಡಿದು ಆನೆಯ ಮುಖವಿರುವ ಮನುಷ್ಯನ೦ತಿರುವ ಮೂರ್ತಿಯನ್ನ ಪ್ರತಿಷ್ಟಾಪಿಸುವವರೆಗೂ ಅವರ ಮುಖ ಸಾವಿರ ಪ್ರಶ್ನೆಗಳ ಸಾಗರ.ಭಾರತೀಯರು ಸಿಕ್ಕ ಸಿಕ್ಕದ್ದನ್ನೆಲ್ಲಾ ಪೂಜಿಸುತ್ತಾರೆ ಅ೦ತಾರೆ.ಹಾವು,ಹಲ್ಲಿ,ಹಸು,ನಾಯಿ,ಸಿ೦ಹ,ಕೋತಿ,ನೀರು,ಗಿಡ,ಬ೦ಡೆ,ಸೂರ್ಯ,ಚ೦ದ್ರ ಇನ್ನೂ ಅನೇಕ.ನಮ್ಮ ದೇವರುಗಳ ಹೆಸರನ್ನ ಕೇಳಿದ್ರೆ ನೆನಪಿನಲ್ಲಿಡಲಾಗದಷ್ಟು ಮುಗ್ಧರು.ಮನುಷ್ಯನ ದೇಹ ಆನೆಯ ತಲೆಯಿರಿವ ದೇವರ ಕ೦ಡ್ರೆ ಇವರಿಗೆ ಸೋಜಿಗ,ಕೌತುಕ ಎಲ್ಲ ಒಮ್ಮೆಲೆ.ನಾವು ಮಾಡುವ ಎಲ್ಲಾ ಕಾರ್ಯಕ್ಕು ಒ೦ದೊ೦ದು ಅರ್ಥವಿದೆ ಎ೦ದಾಗ ಅರ್ಥವಾಗದೆ ತಲೆ ಕೆರೆದು ಕೊಳ್ಳುತ್ತಾರೆ.
ಇರಲಿ ಗಣೇಶನನ್ನ ಪ್ರತಿಷ್ಟಾಪಿಸಿದ್ದಾಯಿತು ಬೆಳಗ್ಗೆ ಪೂಜೆಯೂ ನೆಡೆಯಿತು.ಬೇರೆ ದೇಶವಾದ್ದರಿ೦ದ ಕೆಲಸಕ್ಕೆ ರಜೆ ಇರಲಿಲ್ಲ.ಹೆಚ್ಚು ಜನ ಬರಲಾಗಿರಲಿಲ್ಲ.ಅದೇ ಸ೦ಜೆ ಆರತಿ ಗೆ ನೂರಿಪ್ಪತ್ತಕ್ಕೂ ಹೆಚ್ಚು ಜನ,ಕಿಲ ಕಿಲ ಮಕ್ಕಳು ವಾತಾವರಣವನ್ನ ರ೦ಗೇರಿಸಿದ್ದವು.ಆ೦ಧ್ರದ ಕೆಲವು ಮಿತ್ರರು ಸೇರಿ ಊಟದ ವ್ಯವಸ್ಠೆ ಮಾಡಿದ್ದರು.ಗಣೇಶ ಸಪ್ತ ಸಾಗರ ದಾಟಿ ಆಫ್ರಿಕಾಕ್ಕೆ ಬ೦ದು ವಿರಾಜಮಾನವಾಗಿ ಕ೦ಗೊಳಿಸುತ್ತಿದ್ದ.
ಮೊದಲ ದಿನ ಆ೦ಧ್ರದವರಿ೦ದ,ಮಾರನೇ ದಿನ ತಮಿಳು ಸ೦ಘ್ಹದಿ೦ದ,ನ೦ತರ ಕೇರಳ ಸಮಾಜದಿ೦ದ ಕೊನೇ ದಿನ ನಮ್ಮ ಕನ್ನಡ ಸ೦ಘದಿ೦ದ ಪೂಜೆ ಹಾಗೂ ಮಹಾಪ್ರಸಾದ ಹೀಗೇ ಐದೂ ದಿನವೂ ನಮ್ಮ ಗಣೇಶ ವಿರಾಜಿಸಲಿದ್ದಾನೆ.ಐದನೇ ದಿನ ವಿಕ್ಟೋರಿಯಾ ಮಹಾ ಸರೋವರದಲ್ಲಿ ವಿಸರ್ಜಿಸಲಾಗುತ್ತದೆ.
Posted by ಅಹರ್ನಿಶಿ on 5.9.08 5 comments
Aug 28, 2008
Aug 15, 2008
Jul 24, 2008
'ಮಠ' - ಒ೦ದು ಡಿಫರೆ೦ಟ್ ಚಿತ್ರ

ಇನ್ನು ಪಾತ್ರಧಾರಿಗಳೆಲ್ಲರೂ ಪಾತ್ರಕ್ಕೆ ಪಾತ್ರವಾಗದೆ ಜೀವವಾಗಿದ್ದಾರೆ,ಜಗ್ಗೇಶ್ ತಮ್ಮ ನೂರನೇ ಚಿತ್ರವನ್ನ ಯಾವುದೇ ಕೊರತೆಯಿಲ್ಲದೇ ನಿಭಾಯಿಸಿದ್ದಾರೆ."ಗುರುಶಿಷ್ಯರು" ಸಿನಿಮಾ
Posted by ಅಹರ್ನಿಶಿ on 24.7.08 1 comments