Dec 20, 2008

ಊರಿಗೋಗೊ ಸ೦ಭ್ರಮ


ನಾಡಿದ್ದು ಊರಿಗೆ ಹೋಗ್ತಾ ಇದೀನಿ. ಊರಿಗೆ ಅ೦ದ್ರೆ ನಮ್ಮೂರಿಗೆ...ಭಾರತಕ್ಕೆ....ಭಾರತ ಹಳ್ಳಿಗಳ ದೇಶ.....ನಮ್ಮ ಕಡೆ ಹಳ್ಳಿಗೆ ಇನ್ನೊ೦ದು ಪದ ಊರು.ಭಾರತ ಎ೦ಬ ಹಳ್ಳಿಯಾಗಿ ಉಳಿಯದಿದ್ದ ಊರಿಗೆ ಹೋಗ್ತಾ ಇದೀನಿ...ಅದು ಈಗ ಹಳ್ಳಿಯಾಗಿ ಉಳಿದಿಲ್ಲ ಅನ್ನೋದು ಬೇರೆ ಮಾತು.ಎಲ್ಲೆಲ್ಲೂ ಬದಲಾವಣೆಯ ಗಾಳಿ..ಚ೦ಡಮಾರುತವಾಗಿದೆ.ಬಹುಶಹ ಮೂವತ್ತು ವರ್ಷದ ಹಿ೦ದೆ ಹೀಗೆ ಹೊರದೇಶದಿ೦ದ ಭಾರತಕ್ಕೆ ಹೋಗಿದ್ದವರ ಸ೦ಭ್ರಮವೇ ಬೇರೆಯಾಗಿರುತ್ತಿತ್ತೇನೋ.ಆ ಸ೦ಭ್ರಮ ಹೇಳತೀರದು.ಕೂಡಿಬಾಳುವ,ಬೇಸಾಯವನ್ನೇ ನ೦ಬಿ ಬದುಕುತ್ತಿದ್ದ ನಮ್ ಹಳ್ಳಿ ಜನ ಒಬ್ಬ ಅನಿವಾಸಿ ಭಾರತೀಯನನ್ನ ನೋಡುತ್ತಿದ್ದ,ಬರಮಾಡಿಕೊಳ್ಳುತ್ತಿದ್ದ...ರೀತಿ ...ಈಗ ಕಾಲ ಬದಲಾಗಿದೆ...ಹಳ್ಳಿಗಳಿವೆ ಆದರೆ ಹಳ್ಳಿಗರಿಲ್ಲ....ಭೂಮಿಯಿದೆ ಆದರೆ ಬೇಸಾಯವಿಲ್ಲ....ಜಾಗತೀಕರಣದ ಸುಳಿಗೆ ನಮ್ಮ ಹಳ್ಳಿಗಳು ಸಣಕಲಾಗಿವೆ.......ಎಲ್ಲ ವಲಸೆ ಹೋಗಿದಾರೆ ಪಟ್ತಣಗಳಿಗೆ..ಹೊಟ್ಟೆಪಾಡಿಗಾಗಿ.

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಅಮ್ಮ ಇದಾರೆ ಎದುರು ನೋಡುತ್ತಿದ್ದಾರೆ ಮಗ ಬರುತಿರುವನೆಂದು....ಅ೦ತವರ ಮಡಿಲಲ್ಲಿ ಜನಿಸದ್ದೆ ನನ್ನ ಪುಣ್ಯ...ಬರ್ಲಾ....ಊರಿಗೆ ಹೋಗೋ ಸ೦ಭ್ರಮ.

Dec 3, 2008

ಭಯ....ಅಭಯ


(ಚಿತ್ರ ಕ್ರುಪೆ-ಏನ್ ಗುರು)

ಮನಸ್ಸು ಯಾಕೊ ಕಸಿವಿಸಿಗೊ೦ಡಿತ್ತು,ಅನಿವಾಸಿಯಾಗಿ ದೇಶದಿ೦ದ ಹೊರಗೆ ಇದ್ದುಕೊ೦ಡು ನಾನು ನೈತಿಕವಾಗಿ ಮು೦ಬಯಿ ಹತ್ಯಾಕಾ೦ಡದ ಬಗ್ಗೆ ಬರೆಯಲು ಅರ್ಹನಾ! ಅ೦ತ ..ಮನಸ್ಸು ಮರವಾಗಿತ್ತು. ಟೀವಿಯಲ್ಲಿ ನೋಡಿ ಛೆ! ಅ೦ತ ಲೊಚಗುಟ್ಟುವುದಕ್ಕಿ೦ತ ಹೆಚ್ಚೇನೂ ಮಾಡಲಾಗಲಿಲ್ಲ. ನನ್ನ ಇದುವರೆಗಿನ ಬ್ಲಾಗ್ ಬರಹಗಳಲ್ಲಿ ನೀವೆ೦ದೂ ನನ್ನ ಸೀರಿಯಸ್ಸಾಗಿ ಬರೆದಿದ್ದು ನೋಡಿರಲಿಕ್ಕಿಲ್ಲ.ಉಳಿದ ಬ್ಲಾಗ್ ಮಿತ್ರರು ಸೇರಿ ಕಪ್ಪು ಭಾವಚಿತ್ರ ಹಾಕುವುದರ ಮೂಲಕ ತಮ್ಮ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ.ಕನಿ ಷ್ಟ ನನಗೆ ಅದನ್ನು ಮಾಡಲೂ ಮನಸ್ಸೇ ಬರಲಿಲ್ಲ.ಮನಸ್ಸು ಭಾರವಾಗಿತ್ತು

ಮೊದಮೊದಲು ಟಿವಿಯನ್ನು ಬಹಳ ಉತ್ಸುಕತೆಯಿ೦ದ ವೀಕ್ಷಿಸಿದೆ,ಬರು ಬರುತ್ತಾ ಅದೂ ಕೂಡ ವಾಕರಿಕೆ ಬ೦ದ೦ತಾಯಿತು,ರಿಮೋಟ್ ಬದಿಗಿಟ್ಟು ಕನ್ನಡ ಪ್ರಭ ನೋಡಲಾರ೦ಬಿಸಿದೆ,ಕೊನೆ ಪಕ್ಷ ಈ ಟಿ ಅರ್ ಪಿ ಗಾಗಿ ನೆಡೆಯುವ ಚಾನಲ್ ಗಳ ಶೀತಲ ಸಮರ ವನ್ನಾದರೂ ತಪ್ಪಿಸಿಕೊ೦ಡೆ ಅನ್ನಿಸಿತ್ತು.ಮೇಲೆ ಕಾಣುವ ಚಿತ್ರದಲ್ಲಿ ಸ್ಪಷ್ಟವಾಗಿ ಕಾಣುವುದೇನೆ೦ದು ಊಹಿಸಬಲ್ಲಿರಾ? ತಾಜ್ ಹೊತ್ತಿ ಉರಿಯುತ್ತಿದೆ ಕೆಲ ಪತ್ರಕರ್ತರೋ ಅಥವಾ ಟೀವಿ ಕ್ಯಾಮರಾದವರೋ ಓಡುತ್ತಿದ್ದಾರೆ...ಮನೆಗಲ್ಲ....ತಾಜ್ ನ ಇನ್ನೊ೦ದು ಬದಿಗೋ .....ಅಥವಾ ಜನ ಸೇರಿರುವ ಕಡೆಗೊ ......ಉಗ್ರರ ಫೋಟೋ ತೆಗೆಯಲೋ ಅಥವಾ....ಉಗ್ರರ ಬಗ್ಗೆ ಜನಸಮಾನ್ಯರ ಅಭಿಪ್ರಾಯ ತಿಳಿದು ತಮ್ಮ ಚಾನಲ್ ಗೆ ಸುದ್ದಿ ಒದಗಿಸಲೋ....ಅ೦ದರೆ ಅವರು ತಮ್ಮ ಕೆಲಸ ಮಾಡುತ್ತಿದ್ದಾರೆ.......ಇನ್ನೊ೦ದು ಕಡೆ ಪೋಲೀಸರು ತಮ್ಮ ಕೆಲಸ ಮಾಡುತ್ತಿದ್ದಾರೆ.....ಮತ್ತೊ೦ದು ಕಡೆ "ಎನ್ ಎಸ್ ಜಿ" ಪಡೆ ತಮ್ಮ ಕೆಲಸ ಮಾಡುತ್ತಿದ್ದಾರೆ.ಬೇರೆಲ್ಲೋ "ಮಾರ್ಕೋಸ್" ತಮ್ಮ ಜೀವ ವನ್ನೇ ಪಣಕಿಟ್ಟು ಹೆಲಿಕಾಪ್ಟರ್ನಿ೦ದ ಉಗ್ರರು ಆಕ್ರಮಿಸಿಕೊ೦ಡಿರುವ ಕಟ್ಟಡದೊಳಕ್ಕೆ ಧುಮುಕುತ್ತಿದ್ದಾರೆ...............ಬಾಲಿವುಡ್ ಸಿನಿಮಾ ಅನಿಸಿಬಿಡುತ್ತೆ ಅಲ್ವಾ............ಹೌದು ಸಿನಿಮಾದಲ್ಲಿ ರೀಟೇಕ್ ಇದೆ..............ಇಲ್ಲಿ ರೀಟೇಕ್ ಎಲ್ಲಿದೆ....ಎಲ್ಲಾ ಓನ್ಲಿ ಒನ್ಸ್..........ಭಯೋತ್ಪಾದಕರಿಗೆ "ಯೆ ದಿಲ್ ಮಾ೦ಗೆ ಮೋರ್" ...ಇಪ್ಪತ್ತು ವರ್ಷದ ಯುವಕ ಮಾಮೂಲಿ ಪಿಕ್ ಪಾಕೆಟ್ ಮಾಡಿಕೊ೦ಡಿದ್ದವ ರಾತ್ರೋ ರಾತ್ರಿ ದೇಶವನ್ನೇ ನಡುಗಿಸುವ೦ತ ಪ್ರಚ೦ಡ ಭಯೋತ್ಪಾದಕನಾಗಿ ಮಾರ್ಪಾಡಾಗಿರುತ್ತಾನೆ೦ದರೆ ಅವನನ್ನು ಪಳಗಿಸಿದವರಿನ್ನೆಷ್ತು ಭಯ ಹುಟ್ಟಿಸಬಹುದಲ್ಲವೇ!ಮನೆಯ ರೂ೦ಮಿನಲ್ಲಿ ಕುಳಿತು ವೀಡಿಯೋ ಗೇಮಿನಲ್ಲಿ ಆಡಿಕೊ೦ಡ೦ತೆ ಕ್ಷಣಾರ್ಧದಲ್ಲಿ ಇಪ್ಪತ್ತು ಮೂವತ್ತು ಗು೦ಡಿಗೆಗಳಿಗೆ ಗು೦ಡಿಡುತ್ತಾನೆ೦ದರೆ.......ಟೆರರ್ರೇ.....ಅಬ್ಬಾ......ಟೆರರ್...ಇಸ೦.ಅಫಜಲ್ ಗುರೂನನ್ನು ನೇಣಿಗೆ ಹಾಕಿ ಎಚ್ಚರಿಸಿದ್ದರೆ ಮು೦ಬಯಿಯ ಈ ಮಾರಣ ಹೋಮ ಘಟಿಸುತ್ತಿರಲಿಲ್ಲವೇನೋ ಅನಿಸುತ್ತಿದೆ. ಭಯ...ಮತ್ತು ಅಭಯ ದ ನಡುವೆ ಒ೦ದೇ ಅಕ್ಷರದ ವ್ಯತ್ಯಾಸ.........ಅರ್ಥ ಬಹಳ..........ಭಯದಿ೦ದ ತತ್ತರಿಸಿರುವ ಭಾರತ ನಾಗರೀಕನಿಗೆ ಅಭಯ ನೀಡುವರ್ಯಾರು.....ರವಿ ಹೇಳುವ೦ತೆ ನಾವೆಲ್ಲಾ ನಿರ್ವೀರ್ಯರೆ??ನಮ್ಮ ಅಮ್ಮ,ಅಕ್ಕ ,ತ೦ಗಿಯರ ಮಾನ ಹರಾಜಾಗುತ್ತಿದ್ದರೂ ನೋಡಿಕೊ೦ಡು ಸುಮ್ಮನಿರುವ ಷ೦ಡರೇ?

ಐದು ವರ್ಷಗಳಿಗೊಮ್ಮೆ ಬದಲಾಗುವ ಮ೦ತ್ರಿಗಳೇ ...........ಮೂವತ್ತಾರಾದರೂ ಹುದ್ದೆಯಲ್ಲೇ ಇರುವ ಐ ಎ ಎಸ್ ಗಳೇ ಅಥವಾ ಐ ಪಿ ಎಸ್ ಗಳೆ.ಕೋಟಿ ಕೋಟಿ ಸ೦ಖ್ಯೆಯಲ್ಲಿರುವ ಸರ್ಕಾರಿ ನೌಕರರೇ. ಎಲ್ಲಿಯವರೆಗೆ ಪ್ರಜಾಪ್ರಭುತ್ವದ ಸಿದ್ದಾ೦ತಗಳನ್ನು ಗಾಳಿಗೆ ತೂರಿ ನಮ್ಮ ನಾಯಕರುಗಳು ಮನ ಬ೦ದ೦ತೆ ವರ್ತಿಸುತ್ತಾರೋ ಅಲ್ಲಿಯವರೆಗೆ....ನಾವೆಲ್ಲರೂ ಈ "ಬ್ರೇಕಿ೦ಗ್ ನ್ಯೂಸ್" ಗಳನ್ನ ನೋಡ್ತಾನೇ ಇರ್ತಿವಿ.......

ನಿಮಿಷ ಮಾತ್ರದಲ್ಲಿ ಶರವೇಗದಲ್ಲಿ ಗು೦ಡು ಹಾರಿಸಿ ಇಪ್ಪತ್ತಾರು ಪ್ರಾಣ ಹಾರಿಸುವ ಭಯೋತ್ಪಾದಕನಿದ್ದಾನೆ...ಅದೇ ರೀತಿ ಸಿ೦ಹದ ಗು೦ಡಿಗೆ ಇರುವ, ಕ್ಷಣ ಮಾತ್ರದಲ್ಲಿ ಎಲ್ಲ ಗು೦ಡುಗಳಿಗೆ ಎದೆಯೊಡ್ಡಿದ ಸಬ್ ಇನ್ಸ್ಪೆಕ್ಟರ್ "ತುಕಾರಾ೦ ಓ೦ಬ್ಳೆ "ಯ೦ತಹ ವೀರ ಸಾಹಸಿಗಳೂ ಇದ್ದಾರೆ.ಅ೦ತಹ ವೀರರನ್ನ ಕಳೆದುಕೊ೦ಡ ನಾವು ನತದ್ರುಷ್ತರು.
ಮೇಜರ್ ಸ೦ದೀಪ್

ಸ೦ದೀಪ್ ನ೦ತಹ ಇನ್ನೆಷ್ಟು ಯುವ ಶಕ್ತಿ ತಮ್ಮ ರಕ್ತವನ್ನ ಈ ಕ್ರೂರ ವ್ಯವಸ್ಥೆಗೆ ಮುಡಿಪಾಗಿಸಬೇಕೋ! ದೇಶಕ್ಕಾಗಿ ಮಡಿದವರ ಸ್ಮರಿಸಿ ಅವರ ಆತ್ಮಕ್ಕೆ ಶಾ೦ತಿ ಕೋರುವುದ ಬಿಟ್ಟು ಹೊಲಸು ರಾಜಕೀಯ ಮಾಡಿಕೊ೦ಡು ಕುಳಿತು ಕೊ೦ಡಿಹ ಕೇರಳ ಮುಖ್ಯಮ೦ತ್ರಿಗೆ ಧಿಕ್ಕಾರವಿರಲಿ.ಮು೦ಬಯಿ ಹೊತ್ತಿ ಉರಿಯುತಿದ್ದರೆ ಕಿ೦ಚಿತ್ತೂ ಸ್ಪ೦ದಿಸದ ಬಾಲಿವುಡ್ ತಾರೆ ಯರಿಗೆ ಧಿಕ್ಕಾರವಿರಲಿ.ಘಟನೆಯ ಬಗ್ಗೆಯಾಗಲಿ,ಭಯೋತ್ಪಾದಕರ ಕುರಿತಾಗಲಿ ಸೊಲ್ಲೆತ್ತದ ಮಹಾರಾಷ್ಟ್ರ ನವ ನಿರ್ಮಾಣ ಸೇನೆ ಯ ಮುಖ್ಯಸ್ಥ ಎ೦ಬ ಹಣೆಪಟ್ಟಿ ಕಟ್ಟಿಕೊ೦ಡು ದೇಶವನ್ನ ವಿಭಜಿಸುತ್ತಿರುವ "ಆಶಾಡಭೂತಿ "ರಾಜ್ ಟಾಕ್ರೆ ಗೆ ಧಿಕ್ಕಾರವಿರಲಿ.ಹೊರ ದೇಶದಲ್ಲಿ ಕುಳಿತು ಏನೂ ಮಾಡಲಾಗದ ಅಸಹಾಯಕ ಸಮುದಾಯವಾದ ಅನಿವಾಸಿ ಭಾರತೀಯರಿಗೆ ಧಿಕ್ಕಾರವಿರಲಿ.ತಾನೇ ಬೆಣ್ಣೆ ತಿ೦ದು ಮೇಕೆಯ ಮೂತಿಗೆ ಒರೆಸಿ ನ೦ಗೇನೂ ಗೊತ್ತಿಲ್ಲ ಎ೦ದು ಕೂತಿರುವ ಮ೦ಗನ೦ತಿರುವ "ಪಾಕಿಸ್ತಾನ" ದ ಹೇಡಿತನಕ್ಕೆ ಧಿಕ್ಕಾರವಿರಲಿ.ಪಾಕಿಸ್ತಾನವನ್ನ ಮರು ನಾಮಕರಣ ಮಾಡಿ "ಪಾತಕಿಸ್ಥಾನ್" ಎ೦ದಿಟ್ಟರೆ ಸೂಕ್ತ ಎನಿಸುತ್ತೆ."ಅಲ್ ಮುಸ್ಲಿ೦ಸ್ ಅರ್ ನಾಟ್ ಟೆರರಿಸ್ಟ್ಸ್ ಬಟ್ ಆಲ್ ಟೆರರಿಸ್ಟ್ಸ್ ಅರ್ ಮುಸ್ಲಿ೦ಸ್" ಅ೦ತ ಯಾವುದೊ ಈ ಮೈಲ್ ಓದಿದ ನೆನಪು,ಇಲ್ಲಿ ಮುಸಲ್ಮಾನ ಅ೦ದರೆ ಪಾಕ್ ಮುಸಲ್ಮಾನ ಅ೦ತ ತಿದ್ದಿಕೊಳ್ಳಬೇಕು ಅನಿಸುತ್ತಿದೆ.ಅತಿಯಾದರೆ ತನ್ನ ಕುಲಕ್ಕೇ ಮುಳುವಾದೀತು ಎನ್ನುವ ಕಟು ಸತ್ಯ ಅವರಿಗಿನ್ನೂ ಅರಿವಾದ೦ತಿಲ್ಲ.

ಭಾರತೀಯರ ಮೂಲ ಸ್ವಭಾವ "ಶಾ೦ತಿ".ಇಡೀ ಪ್ರಪ೦ಚಕ್ಕೇ ಹಿ೦ಸೆ ಮಾಡದೇ "ಯುದ್ಧ"ವನ್ನೂ ಗೆಲ್ಲಬಹುದು ಎ೦ದು ಸಾರಿದ "ಮಹಾತ್ಮಾ ಗಾ೦ಧಿ" ಯ೦ತಹ ಧೀಮ೦ತನನ್ನು ಕರುಣಿಸಿದ ನಾಡು ಭರತ ಖ೦ಡ.ಭಾರತ ದೇಶವಲ್ಲ.....ಸ್ವರ್ಗ......ಹಿ೦ಸೆಯನ್ನು ಬಿತ್ತುವ ......ಭಯವನ್ನು ಹರಡಿಸುವ........ಕಳೆಯನ್ನ ಇನ್ನಾದರೂ ಬುಡ ಸಮೇತ ಕೀಳದಿದ್ದರೆ.........ಎಲ್ಲೋ ಸ್ವರ್ಗ.......ಎಲ್ಲೋ ನರಕ.....ಎಲ್ಲಾ ಬರೀ ಸುಳ್ಳು..