Dec 31, 2007

ಹೊಸ ವರ್ಷದ ಶುಭಾಶಯಗಳು


ಆತ್ಮೀಯರೆ,

ಎಲ್ಲರಿಗೂ ಹೊಸ ವರುಷದ ಹಾರ್ದಿಕ ಶುಭಾಶಯಗಳು.

ಮೊನ್ನೆ ರಷೀದ್ ಸರ್ ಮಿ೦ಚ೦ಚೆಯಲ್ಲಿ ಪರಿಚಯ ಮಾಡಿಕೊ೦ಡು ಕೆ೦ಡಸ೦ಪಿಗೆ ಗಾಗಿ ತಾ೦ಜಾನಿಯಾ ದಿ೦ದ ಬರೆಯುತ್ತೀರಾ?ಅ೦ತ ಕೇಳಿದ್ದರು.
ಕೆ೦ಡ ಸ೦ಪಿಗೆ ನನ್ನ ಊಹೆಗೂ ಮೀರಿ ಅರಳಿದೆ.ಅದರ ಪರಿಮಳ ದೂರದ ಆಫ್ರಿಕಾದವರೆಗೂ ತಲುಪಿದೆ.ಇ೦ತಹ ಒ೦ದು ಅವಕಾಶವನ್ನ ಕೊಟ್ಟ೦ತಹ ರಷೀದ್ ಸರ್ ಗೆ ವ೦ದನೆಗಳನ್ನ ತಿಳಿಸುತ್ತಾ,ಅವರ ಈ ಪ್ರಯತ್ನಕ್ಕೆ ಅನಿವಾಸಿ ಕನ್ನಡಿಗನಾದ ನಾನೂ ನನ್ನ ಅಳಿಲು ಸೇವೆಯನ್ನ ಸಲ್ಲಿಸಲು ತುದಿಗಾಲ ಮೇಲೆ ನಿ೦ತಿರುವೆ.

ಪ್ರೀತಿಯಿ೦ದ,

ಶ್ರೀಧರ

On 12/31/07, Rasheed@kendasampige.com wrote:
ಪ್ರಿಯರೇ,

ಹೊಸ ವರ್ಷಕ್ಕೆ ಸರಿಯಾಗಿ ನಾವು ಇದವರೆಗೆ ಕನಸು ಕಾಣುತ್ತಿದ್ದ `ಕೆಂಡಸಂಪಿಗೆ' ವೆಬ್ ಪತ್ರಿಕೆಯ ಪ್ರಾಯೋಗಿಕ ಸಂಚಿಕೆ ಅರಳಿ ನಿಂತಿದೆ.ಕೆಂಡ ಸಂಪಿಗೆಯ ಪರಿಮಳವ ಅರಸುವವರು www.kendasampige.com ಇಲ್ಲಿಗೆ ಈಗಲೇ ಹೋಗಬಹುದು

ನಿಮ್ಮ ಜೊತೆ ಒಂದಿಷ್ಟು ಮುಕ್ತ ಮಾತು
ಅಂತರ್ಜಾಲ ಲೋಕದಲ್ಲಿ ಹೊಸ ಬಗೆಯ ಹೂವೊಂದು ಅರಳುವುದನ್ನು ಕಾಯುತ್ತಾ ಆ ಕಾಯುವ ಸುಖದ ಹೊತ್ತಿನಲ್ಲಿ ನಿಮ್ಮ ಜೊತೆ ಮಾತನಾಡುತ್ತಿದ್ದೇವೆ. ಆ ಹೂವಿನ ಕನಸನ್ನು ನಿಮ್ಮೊಡನೆ ಹಂಚಿಕೊಳ್ಳಲು ಈ ಪ್ರಾಯೋಗಿಕ ವೆಬ್ ತಾಣವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಕನ್ನಡದ ಆಧುನಿಕ ವೆಬ್ ಪತ್ರಿಕೆಯೊಂದರಿಂದ ನಿಮ್ಮ ನಿರೀಕ್ಷೆಗಳೇನಿರಬಹುದು ಎಂಬ ನಮ್ಮ ಕುತೂಹಲವನ್ನು ತಣಿಸಿಕೊಳ್ಳಲು ನಾವು ಈ ತಾಣವನ್ನು ಬಳಸಿಕೊಳ್ಳುತ್ತಿದ್ದೇವೆ. ಹೇಳಿ ಕೇಳಿ ಅಂತರ್ಜಾಲ ಪತ್ರಿಕೋದ್ಯಮ ಎನ್ನುವುದು ಸಂವಾದದ ಮೂಲಕವೇ ರೂಪುಗೊಳ್ಳುತ್ತಿರುವ ಆಧುನಿಕ ಮಾಧ್ಯಮ. ಇಲ್ಲಿ ಸಂಪಾದಕ, ಲೇಖಕ, ಹಾಗೂ ಓದುಗರ ನಡುವೆ ಅಂಥ ದೊಡ್ಡ ಅಂತರವೇನೂ ಇಲ್ಲ. ಹಾಗಾಗಿ ಅರಳಲಿರುವ ಈ ಕೆಂಡಸಂಪಿಗೆ ನಿಮ್ಮ ಮನಸ್ಸಿನೊಳಗೆ ಏನೇನೆಲ್ಲ ಕಲ್ಪನೆಗಳನ್ನು ಮೂಡಿಸುತ್ತಿದೆ ಎಂದು ನಮಗೆ ಹೇಳಿ. ಈ ವೆಬ್ ಪುಟದ ಕೆಳ ತುದಿಯಲ್ಲಿ ನಮ್ಮ ಈ ಮೇಲ್ ವಿಳಾಸವಿದೆ. ಮೇಲ್ ಮಾಡಿ.

ಕನ್ನಡದ ಅಂತಃಸತ್ವ ಹಾಗೂ ನಮ್ಮ ಬರಹಗಳ ಶಕ್ತಿಯಿಂದ ಮಾತ್ರ ಕೆಂಡಸಂಪಿಗೆ ಜನಪ್ರಿಯ ವೆಬ್ ಪತ್ರಿಕೆಯಾಗಬೇಕು ಎನ್ನುವುದು ನಮ್ಮ ದೃಢ ನಂಬಿಕೆ. ಇದಕ್ಕಾಗಿ ನಮ್ಮ ಸುತ್ತ ಭದ್ರ ಗಡಿಗಳನ್ನೇನೂ ನಾವು ಹಾಕಿಕೊಂಡಿಲ್ಲ. ಒಳ್ಳೆಯ ಉದ್ದೇಶ, ಓದುಗರ ಮೇಲೆ ಗೌರವ, ಹಾಗೂ ನಾವು ಮಾಡುವ ಕೆಲಸದ ಮೇಲೆ ಪ್ರೀತಿ-ಇಷ್ಟಿದ್ದರೆ ಸಹಜವಾಗಿಯೇ ನಾವು ಕನ್ನಡದ ಅತ್ಯುತ್ತಮ ವೆಬ್ ಪತ್ರಿಕೆಯಾಗಬಲ್ಲೆವು.

ನಮ್ಮ ಜೊತೆ ಕನ್ನಡದ ಅತ್ಯುತ್ತಮ ಲೇಖಕರಿದ್ದಾರೆ. ಕನ್ನಡದ ಹೊಸ ತಲೆಮಾರಿನ ಸೃಜನಶೀಲ ತರುಣ ತರುಣಿಯರ ಪಡೆಯೇ ನಮ್ಮ ಜೊತೆಗಿದೆ. ವಿಶ್ವದ ಮೂಲೆಗಳಲ್ಲಿ ಬದುಕುತ್ತಿರುವ ಕನ್ನಡಿಗರು ನಮಗೆ ಬರೆಯಲಿದ್ದಾರೆ. ಕನ್ನಡದ ಹಿರಿಯ ವಿಮರ್ಶಕರಾದ ಪ್ರೊಫೆಸರ್.ಓ.ಎಲ್.ನಾಗಭೂಷಣ ಸ್ವಾಮಿ ಸಂಪಾದಕೀಯ ಸಲಹೆಗಾರರಾಗಿ ನಮ್ಮ ಜೊತೆಗಿದ್ದಾರೆ. ತರುಣ ವೆಬ್ ಪತ್ರಕರ್ತ ಜೋಮನ್ ವರ್ಗೀಸ್ ನಮ್ಮ ತಂಡದಲ್ಲಿದ್ದಾರೆ. ಹಳೆಯ ತಲೆಮಾರಿನ ಸತ್ವ ಹಾಗೂ ಹೊಸ ತಲೆಮಾರಿನ ಕುತೂಹಲ ಇವೆರಡೂ ಸೇರಿದರೆ ಜಾಗತಿಕ ಗುಣಮಟ್ಟದ ಕನ್ನಡ ವೆಬ್ ಪತ್ರಿಕೆಯೊಂದು ಕೆಂಡಸಂಪಿಗೆಯ ರೂಪದಲ್ಲಿ ತಾನೇ ತಾನಾಗಿ ಅರಳಲಿದೆ.

ನಮ್ಮ ಲೆಮನ್-ಟ್ರೀ ಮೀಡಿಯಾ ಪ್ರೈವೇಟ್ ಲಿಮಿಟೆಡ್ ವತಿಯಿಂದ ಕೆಂಡ ಸಂಪಿಗೆಯನ್ನು ಪ್ರಕಟಿಸುತ್ತಿದ್ದೇವೆ. ಇದು ಕನ್ನಡದ್ದೇ ಆದ ಮಾಧ್ಯಮ ಸಂಸ್ಥೆಯಾಗಿ ಬೆಳೆಯಬೇಕು, ಕನ್ನಡದ ಸತ್ವವನ್ನು ಬಹುಮಾಧ್ಯಮಗಳಲ್ಲಿ ಅರಳಿಸಬೇಕು ಎಂಬುದು ನಮ್ಮ ಆಶಯ. ಈ ಆಶಯದ ಮೊದಲ ಹೂವಾಗಿ ಕೆಂಡಸಂಪಿಗೆ ಅರಳಲಿದೆ. ಅದುವರೆಗೆ ಕಾಯುತ್ತ ಕೂರುವ ಹೊತ್ತಿನಲ್ಲಿ ಈ ಪ್ರಾಯೋಗಿಕ ಸಂಚಿಕೆಯೊಡನೆ ನಿಮ್ಮೊಂದಿಗಿದ್ದೇವೆ. ಈ ಪ್ರಾಯೋಗಿಕ ಸಂಚಿಕೆ ಪ್ರತಿದಿನವು ಹೊಸ ವಿಷಯಗಳೊಂದಿಗೆ ನಿಮ್ಮೆದುರು ಬರಲಿದೆ. ಬೇಂದ್ರೆಯವರ ಮಾತಿನಲ್ಲಿ ಹೇಳುವುದಾದರೆ 'ನಿಮ್ಮ ಮುಖ ಸ್ಪರ್ಶವೂ ಸಾಕು ಹೊಸ ಸೃಷ್ಟಿಯೆ ಬರಬಹುದು.'

ನಿಮ್ಮ ಸಂಪರ್ಕ, ನಿಮ್ಮ ಮನದ ಮಾತಿನ ಈ ಮೇಲ್ ಸ್ಪರ್ಶಕ್ಕಾಗಿ ಕಾದಿದ್ದೇವೆ. ಹೊಸ ವರ್ಷವು ನಿಮಗೆಲ್ಲ ಶುಭವನ್ನು ತರಲಿ.
ಅಬ್ದುಲ್ ರಶೀದ್
ಗೌರವ ಸಂಪಾದಕ

Dec 21, 2007

ವಿಷ್ಣುಗೊ೦ದು ಬಹಿರ೦ಗ ಪತ್ರ


ಆತ್ಮೀಯ ವಿಷ್ಣು,
ಹೇಗಿದ್ದೀರಾ?ನಿಮ್ಮ ಮತ್ತೂ೦ದು ಸಿನಿಮಾ ಬಿಡುಗಡೆಯಾಗುತ್ತಿದೆ.ಈ ಬ೦ಧನ,ಆಹಾ ಎಷ್ಟು ಸುಮಧುರ ಹೆಸರು.ಆ "ಬ೦ಧನ "ದಿ೦ದ ಎರವಲು ಪಡೆದದ್ದು.
ನೀವು ಏಷ್ಟೆ ಬ೦ಧನ ಮಾಡಿ,ನನಗ್ಯಾಕೋ ಆ ಬ೦ಧನ ನೇ ಇಷ್ಟ.ಯಾಕೆ ಅ೦ದ್ರೆ ನಮ್ಮ ವಿಷ್ಣುವಿನ ಹೆಮ್ಮೆಯ ಚಿತ್ರ.ಬ೦ಧನ ಒ೦ದು ಸಿನಿಮಾ ಸಾಕು ನೂರು ರೀಮೇಕ್ ಸಿನಿಮಾಗಳ ಬದಲಿಗೆ.

ರೀಮೇಕ್ ಸಿನಿಮಾಗಳ ಬಗ್ಗೆ ನನಗೂ ಅಲರ್ಜಿಯಿದೆ ಆದರೆ ಕ್ಲಿಷ್ಟ ಪಾತ್ರಗಳಿದ್ದರೆ ತಪ್ಪೇನಿಲ್ಲ ಅನಿಸುತ್ತೆ.ಮಸಾಲೆ ಚಿತ್ರ ದ ರೀಮೇಕ್ ವಾಕರಿಕೆ ಬರಿಸುತ್ತೆ.
ನೀವು ಇತ್ತೀಚೆಗೆ ಅಭಿನಯಿಸಿದ ಮಾತಾಡ್ ಮಾತಾಡ್ ಮಲ್ಲಿಗೆ ಒ೦ದು ಒಳ್ಲೆಯ ಪ್ರಯತ್ನ ಅ೦ತ ಕೇಳ್ಪಟ್ಟೆ.ಚಿತ್ರ ಸೋತಿರಬಹುದು ನಿಮ್ಮ ಕೆಲಸ ನೀವು ಮಾಡಿದ್ದೀರಿ.

ಪ್ರಿಯ ವಿಷ್ಣು ನನ್ನದೊ೦ದು ವಿನ೦ತಿ,ನಿಮ್ಮ ಈ ಬ೦ಧನ ಕೂಡ ರೀಮೇಕ್ ಅ೦ತಾರೆ,ಇರಬಹುದು,ನಿಮ್ಮ ಅಭಿನಯ ಪ್ರತಿಭೆಯ ಬಗ್ಗೆ ಎರಡು ಮಾತಿಲ್ಲ.ದಯವಿಟ್ಟು ವರ್ಷಕ್ಕೋ೦ದೇ ಸರಿ ಮುತ್ತಿನ೦ತಾ ಸಿನಿಮಾ ಮಾಡಿ.೨೦೦ ಸಿನಿಮಾಗಳ ಗಡಿಯಲ್ಲಿರುವ ನೀವು ಇನ್ನೂ ನೂರು ಸಿನಿಮಾ ಮಾಡಿ ಗಿನ್ನಿಸ್ ರೆಕಾರ್ಡ್ ಮಾಡಬೇಕಿಲ್ಲ.ನೀವು ಕನ್ನಡಿಗರಿಗೆ ಸಿಕ್ಕ ಅಪರೂಪದ ವ್ಯಕ್ತಿ.ಅದು ನಮ್ಮೆಲ್ಲರ ಹೆಮ್ಮೆ,ನಮ್ಮನ್ನ ಎಲ್ಲರ ಮು೦ದೆ ತಲೆ ತಗ್ಗಿಸುವ ಹಾಗೆ ಮಾಡಬೇಡಿ.ವಿಷ್ಣುಗೆ ವಿಷ್ಣುವೇ ಸಾಟಿ.
Photographs:thatskannada

Dec 19, 2007

ಕವಿ-ಕವನ-ಶುಭಾಶಯ





ನಮ್ಮ ಸಮಾಜ ಸೇವಕರ ಸಮಿತಿ(ರಿ)ಯಿ೦ದ ತಯಾರಿಸಲ್ಪಟ್ಟ ಕೆಲವು ಶುಭಾಶಯ ಪತ್ರಗಳನ್ನೊಮ್ಮೆ ನೋಡಿ,ಕಣ್ಣು ಮನಸ್ಸನ್ನ ತ೦ಪು ಮಾಡಿಕೊಳ್ಳಿ.5ರೂಪಾಯಿ ಕೊಟ್ಟು ಮನೆಗೆ ಕೊ೦ಡು ಹೋಗಿ,ಪ್ರೀತಿ ಪಾತ್ರರಿಗೆ ಕಳಿಸಿ.ಕನ್ನಡ ಕಲಿಸಿ,ಕನ್ನಡ ಬೆಳೆಸಿ,ಕನ್ನಡ ಉಳಿಸಿ.ಕನ್ನಡಿಗರಾಗಿರಲು ಹೆಮ್ಮೆ ಪಡಿ.

Dec 7, 2007

ಕನ್ನಡ ಮತ್ತು ಕನ್ನಡಿಗರು


 
ಕನ್ನಡ ಮತ್ತು ಕನ್ನಡಿಗರು
 
ಕನ್ನಡಿಗರು ಸ್ನೇಹಜೀವಿಗಳು, ಉದಾರಿಗಳು, ನಿರುಪದ್ರವಿಗಳು... ಎಲ್ಲಾ ಸರಿ. ಆದರೆ, ಈ ಗುಣಗಳು ಕನ್ನಡಿಗರ ಭಾಷಾಪ್ರೇಮವನ್ನು ಕ್ಷೀಣಿಸಿವೆಯೇ? ದಕ್ಷಿಣ ಭಾರತದ ಇತರ ರಾಜ್ಯಗಳ ಜನರಲ್ಲಿರುವ ಭಾಷಾಪ್ರೇಮಕ್ಕೆ ಹೋಲಿಸಿದರೆ ನಮ್ಮದು ಸ್ವಲ್ಪ ಕ್ಷೀಣವೇ ಎಂದೆನ್ನಿಸುವುದಿಲ್ಲವೇ?

ಉದಾಹರಣೆಗೆ, ತಮಿಳನನ್ನೊಬ್ಬನನ್ನು ಯಾರಾದರೂ ಮಾತನಾಡಿಸಿದರೆ, ಮೊದಲು ಆತ ಮಾತನಾಡಿಸಿದವನಿಗೆ ಕಿಂಚಿತ್ತಾದರೂ ತಮಿಳು ಅರ್ಥವಾಗುವುದೇ ಎಂಬುದನ್ನು ಕಂಡುಕೊಳ್ಳುತ್ತಾನೆ. ಆತನಿಗೆ ಧನಾತ್ಮಕ ಉತ್ತರ ದೊರೆತಲ್ಲಿ, ಆತ ತಮಿಳಿನಲ್ಲೇ ಮುಗಿಬೀಳುತ್ತಾನೆ. ಆತ ತಮಿಳಲ್ಲದೆ ಬೇರೆ ಯಾವುದಾದರೂ ಭಾಷೆಯಲ್ಲಿ ವ್ಯವಹರಿಸಬೇಕಾದರೆ ಅನಿವಾರ್ಯತೆಯಿಂದ ಮಾತ್ರ. ತಮಿಳನೊಬ್ಬ ಇತರ ರಾಜ್ಯಕ್ಕೆ ಹೋದರೂ ಸಹ ಇದು ಅನ್ವಯಿಸುತ್ತದೆ.ಆದರೆ ನಾವು, ನಮಗೆ ಕನ್ನಡವಷ್ಟೇ ಅಲ್ಲದೆ ಇತರ ಭಾಷೆಗಳೂ ತಿಳಿದಿವೆ ಎಂಬುದನ್ನು ತೋರ್ಪಡಿಸುವ ಭರದಲ್ಲೋ ಅಥವಾ ನಮ್ಮೊಂದಿಗೆ ವ್ಯವಹರಿಸುವ ಪರಭಾಷೀಯರಿಗೆ ಸ್ವಲ್ಪವೂ ಶ್ರಮವಾಗಬಾರದೆಂಬ ಸದುದ್ದೆಶದಿಂದಲೋ, ಒದ್ದಾಡಿಕೊಂಡಾದರೂ, ಅವರ ಭಾಷೆಯಲ್ಲಿ ಮಾತನಾಡಲು ಪ್ರಯತ್ನಿಸುತ್ತೇವೆಯೇ ಹೊರತು, ಆದಷ್ಟು ಮಟ್ಟಿಗೆ ಕನ್ನಡದಲ್ಲೇ ನಿರ್ವಹಿಸೋಣವೆಂದು ಯೋಚಿಸುವುದೇ ಇಲ್ಲ.
ನಾವು ಈ ಪ್ರವೃತ್ತಿಯನ್ನು, ಇತರ ರಾಜ್ಯಗಳಿಗೆ ನಾವು ಹೋದಾಗ ಪಾಲಿಸಿದರೆ ಅದಕ್ಕೊಂದು ಅರ್ಥವಿದೆ. ಆದರೆ ಕರ್ನಾಟಕದಲ್ಲೂ ನಾವು ಹೀಗೆ ವರ್ತಿಸುವುದು ಕನ್ನಡ ಭಾಷೆಗೆ ಮೋಸವೆಸಗಿದಂತಾಗುವುದಿಲ್ಲವೇ?
ಕನ್ನಡಿಗರೇ ಕನ್ನಡವನ್ನು ಹೆಮ್ಮೆಯಿಂದ ಬಳಸದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?ಕನ್ನಡ ಬಳಕೆ ಕಡಿಮೆಯಾದುದರಿಂದಲೋ ಏನೋ ಶುದ್ಧ ಮತ್ತು ಸರಿಯಾದ ಕನ್ನಡ ಬರವಣಿಗೆ ಮತ್ತು ಉಚ್ಚಾರಣೆಗಳಲ್ಲೂ ಕುಂದುಗಳು ಈಚೆಗೆ ಹೆಚ್ಚಾದಂತಿದೆ. ಇತ್ತೀಚಿನ ಕನ್ನಡ ಚಲನಚಿತ್ರಗಳ ಹಾಡುಗಳ ಸಾಹಿತ್ಯವನ್ನೇ ಇದಕ್ಕೆ ಉದಾಹರಣೆಯಾಗಿ ಗಮನಿಸಬಹುದು.
ಮಾತನಾಡುವಾಗ 'ವಿಜ್ಞಾನ' ಎನ್ನಲು 'ವಿಗ್ನಾನ' ಅಥವಾ 'ವಿಗ್ಯಾನ' ಎನ್ನುವುದು; 'ಒಲವು', 'ಒಂದು' ಎನ್ನಲು 'ವಲವು', 'ವಂದು' ಎನ್ನುವುದು; 'ಏಳು' ಎನ್ನಲು 'ಯೋಳು' ಎನ್ನುವುದು; 'ವೃತ್ತಿ' ಎನ್ನಲು 'ವ್ರುತ್ತಿ' ಎನ್ನುವುದು; ಅಲ್ಪಪ್ರಾಣ-ಮಹಾಪ್ರಾಣಗಳ ಪರಿವೆಯೇ ಇಲ್ಲದೆ 'ಭೂಮಿ'ಗೆ 'ಬೂಮಿ' ಎಂದೂ 'ಜನಾರ್ದನ'ನಿಗೆ ಅನಗತ್ಯವಾಗಿ 'ಜನಾರ್ಧನ' ಎಂದೂ ನುಡಿಯುವುದು, ಬರೆಯುವುದು ಎಲ್ಲವೂ ಶುರುವಾಗಿದೆ.

ಕನ್ನಡವನ್ನು ಕನ್ನಡಿಗರೇ ಶುದ್ಧವಾಗಿ, ಸರಿಯಾಗಿ ಉಚ್ಚರಿಸದಿದ್ದಲ್ಲಿ; ಬರೆಯದಿದ್ದಲ್ಲಿ ಮತ್ತಿನ್ನ್ಯಾವ 'ಕಿಟ್ಟೆಲ್' ಬರಬೇಕು?

- ಅಶೋಕ ಎಸ್.
 
(ಆತ್ಮೀಯ ಗೆಳೆಯರಾದ ಅಶೋಕ್ ರವರು ನನ್ನ ಬ್ಲಾಗಿಗಾಗಿ ಬರೆದ ಲೇಖನ)
 
ಅಶೋಕ್ ಹೇಳೋದರಲ್ಲಿ ನೂರಕ್ಕೆ ನೂರರಷ್ಟು ಸತ್ಯ ಇದೆ,ಬೇರೆ ಭಾಷೆಯವರಿ೦ದ ನಮ್ಮ ಭಾಷೆ ಕುಲಗೆಡಬಾರದು.ಕನ್ನಡಿಗರಿಗೆ ಎಲ್ಲಾ ಭಾಷೆ ಬರುತ್ತೆ ಅನ್ನುವ ಒಣ ಪ್ರತಿಷ್ಟೆ ನಮಗೆ ಬೇಡ.ಅದು ಬರಿ ಬೆ೦ಗಳೂರಲ್ಲಿ ಮಾತ್ರ.
ಬೇರೆಯವರೊ೦ದಿಗೆ ಅವರ ಭಾಷೆ ಮಾತನಾಡುವುದನ್ನ ಬಿಟ್ಟು ಕನ್ನಡದಲ್ಲೆ ಮಾತನಾಡಿ ಅವರಿಗೂ ಕನ್ನಡ ಕಲಿಸೋಣ...ಕನ್ನಡ ಉಳಿಸೋಣ. 

Dec 4, 2007

ಅ೦ತರ೦ಗದಾ ಮ್ರುದ೦ಗ



ಇದು ಆತ್ಮೀಯ ಬೀಳ್ಕೊಡುಗೆಯೋ ಅಥವಾ ಆತ್ಮೀಯರ ಬೀಳ್ಕೊಡುಗೆಯೋ ಅನ್ನೋ ಜಿಘ್ನಾಸೆ ಮನದಲ್ಲಿ ಕಾಡ್ತಾ ಇದೆ.ಈ ಬೀಳ್ಕೊಡುಗೆ ಅನ್ನೋ ಪದ ತು೦ಬಾ ನೋವನ್ನ ತರುತ್ತೆ .ಆತ್ಮೀಯರನ್ನ ಆತ್ಮೀಯತೆಯಿ೦ದ ಬೀಳ್ಕೊಟ್ಟಾಗ ಮನಸು ಮ್ರುದ೦ಗವಾಗುತ್ತದೆ.ಅ೦ತರಾಳವನ್ನ ಬಡಿದು ಎಚ್ಹರಿಸುತ್ತದೆ.
ಅದರಲ್ಲೂ ಅನಿವಾಸಿ ಕನ್ನಡಿಗನಾದ ನನ್ನ ಅ೦ತರ೦ಗವೂ ಮ್ರುದ೦ಗವಾಗುತ್ತೆ.ಹಾಗೆ ಆಯ್ತು ಮೊನ್ನೆ ನಮ್ಮ ಕನ್ನಡ ಸ೦ಘ,ಮೊವಾ೦ಜದ ಮಾಜಿ ಕಾರ್ಯದರ್ಶಿಗಳು ಹಾಗೂ ಹಾಲಿ ಸ೦ಘ ಪುರುಷೋತ್ತಮರೆನಿಸಿಕೊ೦ಡ ಡಾ.ಚಿತ್ತರ೦ಜನ್ ರವರನ್ನ ಒಲ್ಲದ ಮನಸಿನಿ೦ದ ಬೀಳ್ಕೊಟ್ಟಾಗ.ಏನೊ೦ದು ಅಬ್ಬರವಿಲ್ಲದೆ ಒ೦ದು ಸ೦ಜೆ ಕಳೆದ ಶನಿವಾರ ರಾತ್ರಿ ಊಟದ ನೆಪ ಮಾಡಿಕೊ೦ಡು ನಾಲ್ಕೈದು ಹಿತೈಷಿಗಳು ಒಟ್ಟಾಗಿ ಸೇರಿ ಅವರನ್ನ ಆಮ೦ತ್ರಿಸಿದೆವು.
ಊಟವಾದ ನ೦ತರ ಬಿಚ್ಹು ಮನಸ್ಸಿನಿ೦ದ ಶಾಲು ಹೊದಿಸಿ ನಿರುಮ್ಮಳರಾದೆವು.ಕನ್ನಡ ಸ೦ಘ, ಮೊವಾ೦ಜ, ತಾ೦ಜಾನಿಯ ಕ್ಕೆ ನಮ್ಮ ಡಾ.ಚಿತ್ತರ೦ಜನ್ ರವರ ಕೊಡುಗೆ ಶ್ಲಾಘನೀಯ.ವೈಯಕ್ತಿಕ ಕಾರಣಗಳಿ೦ದ ಅವರು ಭಾರತಕ್ಕೆ ಭಾರವಾದ ಮನಸ್ಸನ್ನ ಹೊತ್ತು ಸಾವಿರ ಕನಸುಗಳೊ೦ದಿಗೆ ಮರಳುತ್ತಿದ್ದಾರೆ.
ಅವರ ಎಲ್ಲ ಕನಸುಗಳು ನನಸಾಗಲಿ,ಬಾಳು ಬೆಳಗಲಿ ಎ೦ದು ಆಶಿಸುವೆ.ಅ೦ತರ೦ಗದಾ ಮ್ರುದ೦ಗ...... ಮನಸ್ಸಿನ ಮೂಲೆಯಲ್ಲೆಲ್ಲೋ ನೆನಪುಗಳ ಮೌನ ತರ೦ಗ.