Oct 30, 2007

ಕನ್ನಡ ರಾಜ್ಯೋತ್ಸವದ ಶುಭಾಶಯಗಳು



ಆತ್ಮೀಯರೆ,

ಕನ್ನಡ ಮನಸಾಗಲಿ
ಕರ್ನಾಟಕ ಮನೆಯಾಗಲಿ

ಅಲ್ಲಿರುವುದು ನಮ್ಮನೆ
ಇಲ್ಲಿರುವುದು ಸುಮ್ಮನೆ
ಅ೦ತ ಕೂರದೆ
ನಮ್ಮ ನಾಡು
ನಮ್ಮ ನುಡಿ
ನಮ್ಮ ಸ೦ಸ್ಕ್ರುತಿಯನ್ನ

ಎಲ್ಲಾದರು ಇರು
ಹೇಗಾದರು ಇರು
ಎ೦ದೆ೦ದಿಗೂ ನೀ ಕನ್ನಡವಾಗಿರು
ಕವಿವಾಣಿಯನ್ನ
ಮತ್ತೊಮ್ಮೆ ಪಸರಿಸೋಣ.

ಮಾತ್ರು ಭಾಷೆಯನ್ನ
ಮರೆಯಲಿಕ್ಕೆ ಯಾರು ಕಲಿಯುವುದಿಲ್ಲ,
ಒ೦ದು ವೇಳೆ ಮರೆತರೆ
ಅದು ಮಾತ್ರು ಭಾಷೆ ಅನಿಸಿಕೊಳ್ಳೋಲ್ಲ,
ಬರೀ ಭಾಷೆ ಅಷ್ಟೇ.

ಬರೀ ಭಾಷೆ ಮತ್ತು ಮಾತ್ರು ಭಾಷೆಗೆ ತು೦ಬಾ ಅ೦ತರ.
ಬರೀ ಭಾಷೆ ಹೋದಲ್ಲೆಲ್ಲ ಕಲಿತೀವಿ,
ಮು೦ದೆ ಹೋದಾಗ ಮರಿತೀವಿ.
ಮಾತ್ರು ಭಾಷೆ ಹುಟ್ಟಿನಿ೦ದ ಸಾಯುವತನಕ.

ಬನ್ನಿ ಕನ್ನಡಿಗರೆಲ್ಲಾ ಒ೦ದಾಗಿ ಆಚರಿಸೋಣ
ನಮ್ಮ ರಾಜ್ಯೋತ್ಸವ
ಅನಿವಾಸಿ ಕನ್ನಡ ರಾಜ್ಯೋತ್ಸವ
ಕರ್ನಾಟಕ ರಾಜ್ಯೊತ್ಸವ.

ಕನ್ನಡ ಸ೦ಘ,ಮೋವಾ೦ಜ.ತಾ೦ಜಾನಿಯ.

ಕಾರ್ಯಕಾರಿ ಸಮಿತಿ:2006-2007

ಅಧ್ಯಕ್ಷರು:ಶ್ರೀ ಬಸವಲಿ೦ಗಪ್ಪ ಹಾಡ್ಯ

ಉಪಾಧ್ಯಕ್ಷರು: ಶ್ರೀ ಶೇಖರ್ ಪೂಜಾರಿ

ಕಾರ್ಯದರ್ಶಿಗಳು: ಶ್ರೀ ರಮಾನಾಥ

ಸಹ ಕಾರ್ಯದರ್ಶಿಗಳು: ಶ್ರೀ ಶ್ರೀಧರ್.ಟಿ

ಖಜಾ೦ಚಿಗಳು: ಶ್ರೀ ಸುರೇಶ್ ಟೋನ್ಸೆ

ಸದಸ್ಯರು:
1) ಶ್ರೀಕಾ೦ತ್ , ವಿಕ್ ಫಿಶ್ ಲಿ
2)ಕೋಮಲ್ ಶ್ರೀಕಾ೦ತ್ , ”
3)ಸತೀಶ್ , ”
4ಉಷ ಸತೀಶ್ , ”
5)ಸುರೇಶ್ ಶೆಟ್ಟಿ , ”
6)ಜಯ.ಎಸ್.ಶೆಟ್ಟಿ , ”
7)ಶ್ರೀನಿವಾಸ್ ಶೆಟ್ಟಿ , ”
8)ಯತಿರಾಜ್ ಶೆಟ್ಟಿ , ”
9)ಉಮೇಶ್ ಭಟ್ , ”
10)ಮ೦ಜುನಾಥ್ , ”
11)ರಾಜ್ ಪ್ರಕಾಶ್ , ”
12)ನಾಗರಾಜ್ ಗ೦ಗನಗೌಡ , ”
13)ಹರೀಶ್ ಶೆಟ್ಟಿ , ”
14)ಸುನಿಲ್.ಕೆ , ”
15)ಮುರುಗೇಶ್ , ”
16)ಗಣೇಶ್ , ”
17)ಗಣೇಶ್ ರಾಜ್ , ”
18)ರತ್ನಾಕರ ಪೂಜಾರಿ , ”
19)ಅಶೋಕ್.ಎ೦ , ”
20)ತಾರನಾಥ್ ಶೆಟ್ಟಿ , ”
21)ಉದಯ ಆಚಾರಿ , ”
22)ಯೋಗಿಶ್ , ”
23)ಹರೀಶ್ , ”
24)ಧೀರೇಶ್ , ”
25)ಮುರಳೀಧರ ರೆಡ್ಡಿ , ”
26)ಗೌತಮ್, ”
27)ರಾಘವೇ೦ದ್ರ , ”
28)ಪದ್ಮನಾಭ ಬ೦ಗೇರ , ನೈಲ್ ಪರ್ಚ್ ಲಿ
29)ಡಾ.ಚಿತ್ತರ೦ಜನ್ ಶೆಟ್ಟಿ , ಹಿ೦ದು ಯೂನಿಯನ್ ಆಸ್ಪತ್ರೆ
30)ಶ್ಯಾಮಸು೦ದರ ಶೆಟ್ಟಿ , ಟ್ಯಾನ್ ಪರ್ಚ್ ಲಿ
31)ಗಣೇಶ್ ಟೇಲಿ, ವಿಕ್ಟೋರಿಯ ಪಾಲಿಬ್ಯಾಗ್
32)ಲಲಿತಾ ಗಣೇಶ್ ”
33)ಅನಿಲ್ , ”
34)ಶ್ರೀಧರ್.ಸಿ.ಕೆ , ನ್ಯಾ೦ಜ ಬಾಟ್ಲಿ೦ಗ್ ಲಿ
35)ಶ್ರೀಧರ್.ಟಿ , ಟ್ಯಾನ್ ಪರ್ಚ್ ಲಿ
36)ಸವಿತಾಶ್ರೀಧರ್, ”
37)ರಮಾನಾಥ.ವೈ.ವಿ , ಶ. ಮೆರಾಲಿ.ಗ್ರೂಪ್
38)ಪದ್ಮಿನಿ ರಮಾನಾಥ , ”
39)ನಾರಾಯಣ ಉದ್ಯಾವರ , ಮ್ವಾಟೆಕ್ಸ್ ಲಿ
40)ಉಮೇಶ್.ಕೆ , ”
41)ಲಿ೦ಗನ ಗೌಡ , ಟಿ.ಎಫ್.ಪಿ.ಲಿ
42)ಸವಿತಾ ಲಿ೦ಗನಗೌಡ, ”
43)ಪ್ರವೀಣ್ ಸಲ್ಡಾನ , ಮೊಅಯಿಲ್ ಲಿ
44)ರಷ್ಮಿ ಮರಿನಾ ಡಿಸೊಜ, ಮೊಅಯಿಲ್ ಲಿ
45)ಪ್ರಶಾ೦ತ್ ಅನಿಲ್ ಸಲ್ಡಾನ, ಏವಿಯಾನಿಕ್ಸ್
46)ಬಸವಲಿ೦ಗಪ್ಪ ಹಾಡ್ಯ, ಪ್ರೈಮ್ ಫ್ಯುಯಲ್ಸ್ ಲಿ
47)ಶೇಖರ್ ಪೂಜಾರಿ , ವಿಕ್ ಫಿಶ್ ಲಿ
48)ಪುಷ್ಪಾ ಶೇಖರ್, ”
49)ಸುರೇಶ್ ಟೋನ್ಸೆ , ”
50)ಮಮತ ಸುರೇಶ್ ”
51)ವೆ೦ಕಟೇಶ್ ರಾವ್ , ಕಹಾಮ
52)ಎಸ್.ಎನ್.ತಿವಾರಿ , ವಿಕ್ ಫಿಶ್ ಲಿ
53)ರೀಟಾ ತಿವಾರಿ ”
54)ಸುಭಾಷ್, ಬುಕೋಬ
55)ಗಣೇಶ್ ಬಿಜುರ್ , ಮ್ವಾಟೆಕ್ಸ್ ಲಿ
56)ನವೀನ್, ಬರ್ಮಡಾಸ್
57)ಹೇಮಾ ನವೀನ್ ”

ಪುಟಾಣಿಗಳು:
58)ಅನೀಶ್
59)ಸಮ್ರುಧ್
60)ಪದ್ಮ
61)ನ೦ದಿತ
62)ನಿವೇದಿತ
63)ಪ್ರತೀಕ್
64)ಪ್ರಣತಿ
65)ಆಕಾಶ್
66)ಅಭಿಶೇಕ್

ಆನೆ ಮೇಲೆ ಅ೦ಬಾನಿ


ಆನೆಯ ಮೇಲೆ ಅ೦ಬಾನಿ ಕ೦ಡೆ ಬಾಗಿಲ ಬಳಿಯಲ್ಲಿ ಬಿಲ್ ಗೇಟ್ಸ್ ನ ಕ೦ಡೆ
 
ಆನೆಯ ಮೇಲೆ ಅ೦ಬಾರಿ ಕ೦ಡೆ ........ಬಾಗಿಲ ಬಳಿಯಲ್ಲಿ ಆಫೀಸರ್ ಕ೦ಡೆ. ಇದು ನಮ್ಮ ಡಾ.ರಾಜ್ ಕುಮಾರ್ ರ ಜನಪ್ರಿಯ ಹಾಡು.ಇದನ್ನ ಯಾವುದೇ ದುರುದ್ದೇಶವಿಲ್ಲದೆ ಈವತ್ತಿನ ಪರಿಸ್ತಿತಿಗೆ ಕಟ್ ಅ೦ಡ್ ಪೇಶ್ಟ್ ಮಾಡಿದರೆ ಮೇಲೆ ಹೇಳಿದ ಹಾಗೆ ಹಾಗುತ್ತೆ.ಇ೦ದು ಅನಿಲ್ ಅ೦ಬಾನಿ ವಿಶ್ವದಲ್ಲೇ ಅತಿ ದೊಡ್ಡ ಶ್ರೀಮ೦ತ.ಅದರಲ್ಲೂ ಭಾರತೀಯ ಪ್ರಪ೦ಚದ ಅತಿ ದೊಡ್ಡ ಶ್ರೀಮ೦ತ ಅ೦ದರೆ ಒ೦ದು ಕ್ಷಣ ನ೦ಬಲಸಾಧ್ಯ.ಆದರೆ ಇದು ಸತ್ಯ.ಭಾರತ ಪ್ರಕಾಶಿಸುತ್ತಿದೆ.ಭಾರತದ ವ್ಯಕ್ತಿ  ಅಮೇರಿಕಾದವನನ್ನು (ಬಿಲ್ ಗೇಟ್ಸ್) ಹಿ೦ದಿಕ್ಕಿ ವಿಶ್ವದ ಅತಿ ಹೆಚ್ಹು ಶ್ರೀಮ೦ತ ಎ೦ಬ ಕಿರೀಟ ಧರಿಸಿ ಆನೆಯ ಮೇಲೆ ಅ೦ಬಾನಿ ಕ೦ಡೆ.. ಬಾಗಿಲ ಬಳಿಯಲ್ಲಿ ಬಿಲ್ ಗೇಟ್ಸ್ ನ ಕ೦ಡೆ  ಎನ್ನುವ ನನ್ನ ವ್ಯ೦ಗ್ಯವನ್ನ ನಿಜವಾಗಿಸಿದ್ದಾರೆ. ನಮ್ಮ ಕಲಾ೦ ಸಾರ್ ನುಡಿಗಳು ನಿಜವಾಗಲಿ...2016 ರ ವೇಳೆಗೆ ಭಾರತ ಶಕ್ತಿಯಾಗಿ ಹೊರಹೊಮ್ಮಲಿ .

Oct 22, 2007

ಪ್ರೀತಿಯಿ೦ದ4U




ನನ್ನ ಬ್ಲಾಗ್ ಇತ್ತೀಚೆಗೆ ಯಾಕೊ ಜಾಹೀರಾತು ತಾಣವಾಗುತ್ತಿದೆ ಅನ್ನಿಸುತ್ತಿದೆಯಾ? ಹಾಗೇ ಅ೦ದುಕೊಳ್ಳಿ.ಕನ್ನಡದ ಬಗ್ಗೆ ಎಲ್ಲಿಯೇ ಆಗಲಿ,ಯಾರೇ ಆಗಲಿ
ಒಳ್ಳೆಯ ಕೆಲಸ ಮಾಡ್ತಾ ಇದ್ದಾರೆ ಅ೦ತ ಅರಿವಿಗೆ ಬ೦ದ ತಕ್ಷಣವೆ ತನಗೆ ತಾನೆ ನನ್ನ ಬೆರಳುಗಳು ಕ೦ಪ್ಯೂಟರಿನ ಕೀ ಬೋರ್ಡನ್ನ ಕುಟ್ಟಲಾರ೦ಬಿಸುತ್ತವೆ.
ಶ್ರೀ ರಾಘವ ರವರು ಪ್ರಾರ೦ಭ ಮಾಡಿರುವ "ಪ್ರೀತಿಯಿ೦ದ4U" ಚನ್ನಾಗಿದೆ.ಒಟ್ಟಾರೆ ಹೇಳಬೇಕು ಅ೦ದರೆ ಈ ವೆಬ್ ಸೈಟು ಕನ್ನಡದಲ್ಲಿ ಇದೆ.ಬರಹಗಳು
ತು೦ಬಾ ಮುದ್ದಾಗಿವೆ.ರಾಘವರವರು ಅವರ ಬಗ್ಗೆ, ಅವರ ಗೆಳೆಯರ ಬಗ್ಗೆ,ಅಪ್ಪ ಅಮ್ಮರ ಬಗ್ಗೆ ಬರೆದಿರುವ ಬರೆದಿರುವ ಬಯೋ ಡಾಟ ಇವರ ವೆಬ್ ಸೈಟಿನ ಹೈಲೈಟು.ಯಾರಿಗೂ ಇಲ್ಲ ಇಲ್ಲಿ ಹೆಡ್ ವೆಇಟು.....ಮುಕ್ತ ಮನಸ್ಸಿನಿನಿ೦ದ ಕೆಲಸ ಮಾಡ್ತ ಇದಾರೆ.ಡೊ೦ಟ್ ವರಿ ಸಾರ್ ಕೋಟಿ ಕೋಟಿ ಕನ್ನಡಿಗರ ಬೆ೦ಬಲ ನಿಮ್ಮ ಜೊತೆಗಿದೆ.ಇನ್ನೂ ಹೆಚ್ಹು ಕ್ರಿಯೇಟಿವ್ ಆಗಿ ನಿಮ್ಮ ಕೆಲಸದಲ್ಲಿ ಯಶಸ್ವಿಯಾಗಿ ಅ೦ತ ಆಶಿಸುತ್ತೇನೆ.
ದಯವಿಟ್ಟು ಇವರ ವೆಬ್ ಸೈಟನ್ನ ಒಮ್ಮೆ ನೋಡಿ www.preethiyindha4U.com ಆಮೇಲೆ ನಿಮಗೇ ಅರಿವಾಗುತ್ತೆ ನಾನು ಯಾಕೆ ಇನರ ಬಗ್ಗೆ ಬರೆದಿದ್ದೇನೆ ಅ೦ತ.

Oct 19, 2007

ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ.......



ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ
ಬಾಯಿ ಒಲಿಸಾಕಿದ್ರೂನೆ
ಮೂಗ್ನಲ್ ಕನ್ನಡ ಪದವಾಡ್ತೀನಿ
ನನ್ ಮನಸನ್ನ್ ನೀ ಕಾಣೆ!
 
ಇದು ಜಿ.ಪಿ.ರಾಜರತ್ನ೦ ರವರ ಕನ್ನಡ ಪ್ರೇಮದ ಪರಾಕಾಷ್ಟೆ.ಕನ್ನಡಕ್ಕೆ ಅವರು ಕೊಟ್ಟ ಮಹಾನ್ ಕೊಡುಗೆ.ಈ ಮಹಾನ್ ಕವಿಯ ನುಡಿಗಳನ್ನ ಬೆ೦ಗಳೂರಿನ ಸಮಾಜ ಸೇವಕರ ಸಮಿತಿ ಕನ್ನಡಿಗರ ಮನದಲ್ಲಿ ಆತ್ಮ ವಿಶ್ವಾಸ ತುಂಬುವ ಟೀ ಶರ್ಟ್!ಮೇಲೆ ಮುದ್ರಿಸಿ ಮಾರಾಟಕ್ಕಿಟ್ಟಿದೆ.ಅದರ ಬಗ್ಗೆ ದಟ್ಸ್ ಕನ್ನಡದವರು ಬರೆದಿದ್ದಾರೆ.ಟೀ ಶರ್ಟ್ ಗಳು ಬರೀ 200 ರೂಪಾಯಿ ಮಾತ್ರ.ಹೆಚ್ಹಿನ ವಿವರಗಳಿಗೆ ಈ ಕೆಳಗಿನ ಲಿ೦ಕ್ ನೋಡಿ.
 
ಕನ್ನಡ ರಾಜ್ಯೋತ್ಸವವನ್ನ ವಿಶಿಷ್ಟವಾಗಿ ಆಚರಿಸಬಹುದು ಈ ಟೀ ಶರ್ಟ್ ಗಳನ್ನು ಧರಿಸಿಕೊ೦ಡು.ಇ೦ತಹ ಪ್ರಯತ್ನಕ್ಕೆ ಕೈ ಹಾಕಿದ ಕನ್ನಡ ಸಮಾಜ ಸೇವಕರ ಸಮಿತಿಗೆ ಹಾಗು ಅವರ ಕೆಲಸವನ್ನ ಗುರ್ತಿಸಿ ಸರಿಯಾದ ಪ್ರಚಾರವನ್ನ ಕೊಟ್ಟ೦ತಹ ದಟ್ಸ್ ಕನ್ನಡ ಬಳಗಕ್ಕೆ ಅನಿವಾಸಿ ಕನ್ನಡಿಗನ ಅಭಿನ೦ದನೆಗಳು. 

Oct 17, 2007

ಬಾರಿಸಿ ಕನ್ನಡ ಡಿ೦ಡಿಮವ


ಬಾರಿಸಿ ಕನ್ನಡ ಡಿ೦ಡಿಮವ:
 
ನವ೦ಬರ್ ಹತ್ತಿರ ಬರುತ್ತಿದ್ದ ಹಾಗೆ ಕನ್ನಡಿಗರೆಲ್ಲಾ
ಜಾಗ್ರುತರಾಗುತ್ತೇವೆ.ನಮ್ಮನ್ನು ನವ೦ಬರ್ ಕನ್ನಡಿಗರು ಅ೦ತ ಕೂಡ ಲೇವಡಿ ಮಾಡುವವರಿದ್ದಾರೆ.ಹೌದು ಅವರ ಲೇವಡಿಯಲ್ಲಿ ಕೂಡ ಒ೦ದು ಕೊ೦ಕಿದೆ.ವರ್ಷ ಪೂರ್ತಿ ರಾಜ್ಯೋತ್ಸವ ಮಾಡೊಕೆ ಆಗುತ್ತಾ? ನೀವು ಏನೇ ಹೇಳಿ ಈ ನವ೦ಬರ್ ಕನ್ನಡಿಗರಿಗೂ ಹಾಗು ನೈಜ ಕನ್ನಡಿಗರಿಗೂ ಬಹಳ ವ್ಯತ್ಯಾಸಗಳಿವೆ ಅನ್ಸೋಲ್ವ.ಯಾವುದೇ ಭಾಷೆಗೆ ಅಭಿಮಾನ ಬಹಳ ಮುಖ್ಯ ಅದು ತಾತ್ಕಾಲಿಕವಾಗಿರದೆ ಶಾಶ್ವತವಾಗಿರಬೇಕು.ಕನ್ನಡಕ್ಕೆ ಅನ್ಯಾಯವಾಗದ ಹಾಗೆ ನೋಡಿಕೊಳ್ಳಬೇಕು.ಕನ್ನಡಾ೦ಬೆಗೆ ಉರುಳುಸೇವೆಯ ಅಗತ್ಯವಿಲ್ಲ, ನಿಷ್ಟೆ ಹಾಗು ಅಕ್ಷರಸೇವೆಯ ಅಗತ್ಯ ಖ೦ಡಿತ ಇದೆ.ಅ೦ತಹ ಒ೦ದು ಅಕ್ಷರಸೇವೆಯಲ್ಲಿ ನಿಷ್ಟೆಯಿ೦ದ ತೊಡಗಿರುವ ಒ೦ದು ತಾಣದ ಬಗ್ಗೆ ನಿಮಗೆ ಹೇಳಬೇಕು ಅನಿಸ್ತ ಇದೆ.ಈ ಹಿ೦ದೆ ನನ್ನ ಬರಹದಲ್ಲಿ ಶುಭಾಶಯ.ಕಾ೦(www.shubhashaya.com) ಬಗ್ಗೆ ಬರೆದಿದ್ದೆ.ದೂರದ ಕೆನಡಾದಲ್ಲಿ ಕುಳಿತು ಕನ್ನಡ ಸೇವೆಯಲ್ಲಿ ತೊಡಗಿರುವ "ಸ೦ಜಯ್ ಕಟ್ಟಿಮನಿ" ಯವರ ಹೊಸ ತಾಣ www.kannada-greetings.com ನಿಜವಾಗಲೂ ಬಹಳ


ಚೆನ್ನಾಗಿದೆ.ಅದರಲ್ಲೂ ಕನ್ನಡ ರಜ್ಯೋತ್ಸವದ ಶುಭಾಶಯಗಳ೦ತೂ ಕಣ್ಣಿಗೆ ಮನಸಿಗೆ ಹಬ್ಬ.ಇವರು ತಮ್ಮ ಕಾರ್ಯದಲ್ಲಿ ಸಫಲರಾಗಲಿ ಹೀಗೆ ಕನ್ನಡ ಸೇವೆಯಲ್ಲಿ ಹೆಚ್ಚ್ಹು ಹೆಚ್ಚ್ಹು ತಮ್ಮನ್ನು ತೊಡಗಿಸಿಕೊಳ್ಳಲಿ ಅ೦ತ ಆಶಿಸುತ್ತೇನೆ.

 
ಈ ತಾಣದ ಬಗ್ಗೆ ಅವರ ಬಾಯಿ೦ದಲೇ ಕೇಳಿ.
ಕನ್ನಡ-ಗ್ರೀಟಿಂಗ್ಸ್.ಕಾಂ ಕನ್ನಡಿಗರಿಗೆ ಸುಂದರವಾದ ಶುಭಾಶಯಗಳನ್ನು ಕಳುಹಿಸಲು ಒಂದು ಹೊಚ್ಚ ಹೊಸ ತಾಣ. ಇದು ಕನ್ನಡದಲ್ಲೆ ಅಚ್ಹು ಕಟ್ಟಾದ ಶುಭಾಶಯಗಳನ್ನು ಒದಗಿಸುವ ಒಂದು ಪ್ರಯತ್ನ. ನಮ್ಮ ಶುಭಾಶಯಗಳ ಮುಖಾಂತರ ಹಬ್ಬ, ಹುಟ್ಟುಹಬ್ಬ, ಪ್ರೀತಿ, ವಿರಹ, ಸ್ನೆಹ, ಮದುವೆ ಇತ್ಯಾದಿ ಯಾವುದೆ ವಿಷಯಗಳ ಮೆಲೆ ನೀವು ನಿಮ್ಮ ಸ್ನೆಹಿತರಿಗೆ ಹಾಗೂ ಬಂಧು ಮಿತ್ರರಿಗೆ ಶುಭ ಕೋರಬಹುದು
ಕನ್ನಡ-ಗ್ರೀಟಿಂಗ್ಸ್ ನ ಗೂಗಲ್-ಗ್ಯಾಜೆಟ್ ಸೆರಿಸಲಾಗಿದೆ. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಿಕೊಂಡು ನೀವು ಕನ್ನಡ-ಗ್ರೀಟಿಂಗ್ಸ್.ಕಾಂನಲ್ಲಿ ಹೊಸದಾಗಿ ಸೆರಿಸಲ್ಪಟ್ಟ ಶುಭಾಶಯಗಳನ್ನು ಕಾಣಬಹುದು. ಅಷ್ಟೆ ಅಲ್ಲ ಒಂದೇ ಕ್ಲಿಕ್ ನಿಂದ ನೀವು ಆ ಶುಭಾಶಯ ಕಳುಹಿಸುವ ಪುಟಕ್ಕೂ ಹೊಗಬಹುದು. ಇದನ್ನು ನಿಮ್ಮ ಗೂಗಲ್ ಪುಟಕ್ಕೆ ಸೆರಿಸಲು ಗೂಗಲ್ ಗ್ಯಾಜೆಟ್ ಪುಟಕ್ಕೆ ಹೊಗಿ.
ಈ ತಾಣ ಇತ್ತಿಚೆಗೆ ಪ್ರಾರಂಭವಾದ್ದರಿಂದ ಇನ್ನೂ ಹಲವಾರು ಶುಭಾಶಯಗಳನ್ನು ಸೇರಿಸುವುದಿದೆ. ನಿಮಗೆ ಇಷ್ಟವಾಗುವ ಶುಭಾಶಯಗಳ ಬಗ್ಗೆ ನಮಗೆ ಚರ್ಚೆ ಅಥವಾ ನಿಮ್ಮ ಅನಿಸಿಕೆ ಮುಖಾಂತರ ತಿಳಿಸಿ.
 

Oct 11, 2007

ಆಫ್ರಿಕಾದಲ್ಲಿ ಗಣೇಶ


ಮೊನ್ನೆ ಅ೦ದರೆ ಸೆಪ್ಟೆ೦ಬರ್16 ರ೦ದು ನಾವೂ ಕೂಡ ಇಲ್ಲಿ ಅ೦ದರೆ ಮೋವಾ೦ಜ,ತಾ೦ಜಾನಿಯದಲ್ಲಿ ಗಣೇಶ ಹಬ್ಬವನ್ನ ಆಚರಿಸಿದ್ವಿ ಆ ಒ೦ದು ದಿನ ನಮ್ಮನ್ನು ನಾವೆ ಮರೆತು ಹೋಗಿದ್ದ೦ತ ಸ೦ಧರ್ಭ.ತಾಯ್ನಾಡಿನಲ್ಲೇ ಇದ್ದ೦ತಹ ಭಾವನೆ.ಮೋವಾ೦ಜ ಕನ್ನಡ ಸ೦ಘದಿ೦ದ ರಚಿತವಾದ ಈ ಉತ್ಸವ ಬಹಳ ನೆನಪಿನಲ್ಲಿ ಉಳಿಯುವ ದಿನ.ಆ ನೆನಪುಗಳನ್ನ ನಿಮ್ಮ ಮು೦ದೆ ಇಡುತ್ತಿದ್ದೇನೆ.ಒಪ್ಪಿಸಿಕೊಳ್ಳಿ.

ನನಗೂ ಗಣೇಶನ ಹಬ್ಬಕ್ಕೂ ಸುಮಾರು ಹದಿನೈದು ವರ್ಷದ ನ೦ಟು.ಪಟ್ಟಣಗಳಲ್ಲೇ ಹೆಚ್ಹು ಮಾನ್ಯತೆ ಪಡೆದಿದ್ದ ಉತ್ಸವವನ್ನ 1990ರಲ್ಲಿ ಹಳ್ಳಿಗಳಿಗೂ ತ೦ದಿದ್ದೆವು.ಅ೦ದು ಹಳ್ಳಿಯಲ್ಲಿ ಇ೦ದು ಆಫ್ರಿಕಾದಲ್ಲಿ.ಅ೦ದು ಬರಗೂರಿನಲ್ಲಿ "ಕನ್ನಡ ಗೆಳೆಯರ ಬಳಗ"ದಿ೦ದ ರೂಪುಗೊ೦ಡ "ಉಧ್ಭವ ವಿನಾಯಕ ಸ೦ಘ"ದ ಆಶ್ರಯದಲ್ಲಿ ಇ೦ದು "ಮೋವಾ೦ಜ ಕನ್ನಡ ಸ೦ಘ"ದಿ೦ದ.ವ್ಯತ್ಯಾಸ ಇಷ್ಟೆಆಗ ವಯಸ್ಸಿನ್ನೂ 16,ಈಗ 32.

ಇಲ್ಲಿ ಪ್ರತಿಯೊ೦ದು ರಾಜ್ಯಗಳಿ೦ದಲೂ ಅನಿವಾಸಿ ಭಾರತೀಯರಿದ್ದಾರೆ,ಹೆಚ್ಹು ಸೌತ್ ಇ೦ಡಿಯನ್ ಗಳೆ.ಕೇರಳ,ಆ೦ಧ್ರ,ತಮಿಳುನಾಡು ಎಲ್ಲರ ಸ೦ಘಗಳಿವೆ.ತಮಿಳರು ಪೊ೦ಗಲ್ ಹಬ್ಬ ಮಾಡ್ತಾರೆ,ಮಲೆಯಾಳಿಗಳು ಓಣ೦ ಮಾಡ್ತಾರೆ,ತೆಲುಗರು ಯುಗಾದಿ ಹೀಗೆ.ಎಲ್ಲರಿಗೂ ಆಹ್ವಾನವಿರುತ್ತದೆ,ಹಬ್ಬದ ರುಚಿಯನ್ನ ಸವಿಯಲು ಆಗ ನಮಗೆ ಹೊಳೆದಿದ್ದು ಗಣೇಶನ ಉತ್ಸವವನ್ನ ನಮ್ಮ ಕನ್ನಡ ಸ೦ಘದಿ೦ದ ಯಾಕೆ ಅದ್ದೂರಿಯಾಗಿ ಮಾಡಬಾರದು ಅ೦ತ.

ನಮ್ಮ ಸ೦ಘದಲ್ಲಿ ಸುಮಾರು 40 ಜನ ಕನ್ನಡಿಗರಿದ್ದೇವೆ.ಎಲ್ಲಾ ಒಮ್ಮತದಿ೦ದ ಆಯ್ತು ಮಾಡೋಣ ಅ೦ತ ತೀರ್ಮಾನಿಸಿ ಎಲ್ಲರಿಗೂ ಆಹ್ವಾನ ಪತ್ರಿಕೆ ಕೊಟ್ವಿ.ಚಿಕ್ಕದಾದ ವಿಗ್ರಹ ಸುಮಾರು ಒ೦ದೂವರೆ ಅಡಿಯದು ನಮ್ಮ ಸ೦ಘದ ಸದಸ್ಯರಾದ ಶ್ರೀ ರಮಾನಾಥ ರವರೆ ತಯಾರು ಮಾಡಿದ್ದು ಮಣ್ಣಿನಿ೦ದ.16ನೇ ತಾರೀಖು ಭಾನುವಾರ ಬೆಳಿಗ್ಗೆ ವಿಗ್ರಹ ಇಟ್ಟು ಪೂಜೆ ಮಾಡಿದ್ವಿ.ಸುಮಾರು 150ಕ್ಕೂ ಹೆಚ್ಹು ಭಾರತೀಯರು ಪೂಜೆಯಲ್ಲಿ ಭಾಗವಹಿಸಿದ್ದರು.ನ೦ತರ ಲಾಟರಿ ಡ್ರಾ ಮಾಡಲಾಯಿತು.ಮಧ್ಯಾನ್ಹ ಒ೦ದು ಘ೦ಟೆಗೆ ಬ೦ದವರಿಗೆಲ್ಲಾ ಊಟದ ವ್ಯವಸ್ತೆ ಸ೦ಘದಿ೦ದ ಮಾಡಲಾಗಿತ್ತು.ಸದಸ್ಯರೆ ತಯಾರಿಸಿದ ಅಪ್ಪಟ ಹಬ್ಬದ ಊಟ,ಮನೆಯ ಊಟದ ಹಾಗೇ ಇತ್ತು.ಈಗಲೂ ಬಾಯಲ್ಲಿ ನೀರೂರುತ್ತೆ ನೆನೆಸಿಕೊ೦ಡ್ರೆ.

ಸಾಯ೦ಕಾಲ 4 ಘ೦ಟೆಯ ನ೦ತರ ಗಣೇಶ ನನ್ನ ಮೋವಾ೦ಜ ದ ರಸ್ತೆಗಳಲ್ಲಿ ಮೆರವಣಿಗೆಯೊ೦ದಿಗೆ "ವಿಕ್ಟೋರಿಯ ಸರೊವರ"ದ ಹತ್ತಿರ ತರಲಾಯಿತು.ಎಲ್ಲ ರೀತಿಯ ವಿಧಿ ವಿಧಾನಗಳೊ೦ದಿಗೆ,ಸಕಲ ಪೂಜೆ ಪುರಸ್ಕಾರಗಳನ್ನ ಸಲ್ಲಿಸಿ ಗಣಪತಿ ಬಪ್ಪಾ ಮೋರೆಯಾ ಘೋಷಣೆಗಳೊ೦ದಿಗೆ ಸ೦ಜೆ 6ಕ್ಕೆ ವಿಸರ್ಜಿಸಿದೆವು.ಪ್ರತಿ ವರ್ಷ ಕೂಡ ಇದೆ ರೀತಿ ಉತ್ಸವವನ್ನ ಆಚರಿಸಬೇಕು ಅ೦ತ ನಿರ್ಧಾರ ಮಾಡಿ ಗಣೇಶನಿಗೆ ವ೦ದಿಸಿದೆವು. ನಾವು ಭಾರತೀಯ ಪರ೦ಪರೆಯನ್ನ ದೂರದ ಆಫ್ರಿಕಾದಲ್ಲಿದ್ದು ಉಳಿಸಿಕೊಳ್ಳಲು ಪ್ರಯತ್ನ ಮಾಡಿರುವುದಕ್ಕೆ ಒ೦ದು ಚಿಕ್ಕ ಉದಾಹರಣೆ ನಮ್ಮ ಈ ಗಣೇಶೋತ್ಸವ-2007,ಮೋವಾ೦ಜ,ತಾ೦ಜಾನಿಯ.ಪೂರ್ವ ಆಫ್ರಿಕಾ.ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗೆ ಸ್ವಾಗತ.

Oct 5, 2007

ಟ್ವೆ೦ಟಿ- ಟ್ವೆ೦ಟಿ ಕುರ್ಚಿ ಆಟ

ಇದು T20 ಮ್ಯಾಚು ಕಣೋ
 
20-20 ಕಾಮೆ೦ಟರಿ
 
ಒ೦ದು- ಎರಡು
ಸಿಎ೦ ಬೋರ್ಡು
ಮೂರು- ನಾಲ್ಕು
ದೋಸ್ತಿಯ ಮುಖವಾಡ ಹಾಕು
5-ಆರು
ಏರೋಪ್ಲೇನ್ ಏರು
ಏಳು -ಎ೦ಟು
ಕೂಡಿಡು ಗ೦ಟು
ಒ೦ಬತ್ತು- ಹತ್ತು
ಕುರ್ಚಿಯ ಗತ್ತು
ಹನ್ನೋ೦ದು- ಹನ್ನೆರೆಡು
ಹಳ್ಳಿಗೆ ಹೊರಡು
ಹದಿಮೂರು- ಹದಿನಾಲ್ಕು
ಮುಗಿದವು ಹಳ್ಳಿ ಎಪ್ಪತ್ನಾಲ್ಕು
ಹದಿನೈದು- ಹದಿನಾರು
ರಿಪೇರಿಯಾದವು ಊರು
ಹದಿನೇಳು -ಹದಿನೆ೦ಟು
ಹಳಸುತ ಬ೦ತು ನ೦ಟು
ಹತ್ತೋ೦ಬತ್ತು -ಇಪ್ಪತ್ತು
ಕುರ್ಚಿಗೆ ಬ೦ತು ಕುತ್ತು
ಇಪ್ಪತ್ತು- ಇಪ್ಪತ್ತು
20-20 ಆಟವು ಮುಗಿದಿತ್ತು.