Jul 24, 2007

ಎಕ್ಸ್ ಅಲ್ಲ ಎಕ್ಸಲೆ೦ಟ್ ಪ್ರೆಸಿಡೆ೦ಟ್

ಸ್ನೇಹಿತರೆ,

ಇ೦ದು "ಜನತೆಯ ರಾಷ್ಟ್ರಪತಿ" ಯವರ ಕೊನೆಯ ದಿನ . ಈ ವಾರ್ತೆಯನ್ನ ಕನ್ನಡಪ್ರಭದಲ್ಲಿ ಓದಿದಾಗ ಹಾಗೆ ಮನಸ್ಸಿನಲ್ಲಿ ಕಲಾ೦ ಸರ್ ಗೆ ಸಲ್ಯೂಟ್ ಮಾಡಿದೆ. ಹಾಗೆಯೇ "ಕಲಾ೦ ಕ೦ಡ ಏಳು ಬೀಳು" ಮತ್ತು "ಕಲಾ೦ ಕಡೇ ಮಾತು" ಕೂಡ ಓದಿದೆ.
ರಾಜಕೀಯೇತರವಾಗಿ ರಾಷ್ಟ್ರಪತಿ ಹುದ್ದೆಗೇರಿದ ಮೊದಲ ವ್ಯಕ್ತಿ ಹಾಗು 30 ವಿಶ್ವವಿದ್ಯಾಲಯಗಳಿ೦ದ ಗೌರವ ಡಾಕ್ಟರೇಟ್ ಪಡೆದ ಅಪರೂಪದ ವ್ಯಕ್ತಿ.
ತಮ್ಮ ಕಡೇ ಮಾತಿನಲ್ಲಿ 2020 ರ ವೇಳೆಗೆ ಭಾರತವನ್ನ ಅಭಿವ್ರುಧ್ದಿ ಹೊ೦ದಿದ ದೇಶವನ್ನಾಗಿ ಪರಿವರ್ತಿಸಲು ಕರೆ ನೀಡಿದ ಹರಿಕಾರ.ಹಾಗೆಯೇ 2005 ರ ನವೆ೦ಬರ್ 20 ರ೦ದು ಕರ್ನಾಟಕದ ವಿಧಾನಸಭೆಯಲ್ಲಿ ಭಾಷಣ ಮಾಡಿ ಸುವರ್ಣ ಕರ್ನಾಟಕದ ಅಭಿವ್ರುದ್ಧಿಗೆ 11 ಸೂತ್ರಗಳನ್ನ ನೀಡಿದ್ದರು. ನಿಮಗೆಲ್ಲರಿಗೂ ನಮಸ್ಕಾರ.......ಕರ್ನಾಟಕದ ಜನತೆಗೆ ಸುವರ್ಣ ಕರ್ನಾಟಕದ ಶುಭಾಶಯಗಳು......ಎ೦ದು ಕನ್ನಡದಲ್ಲೇ ಶುಭ ಕೋರಿದ್ದರು.

ಆದರೆ ಕಲಾ೦ ಸರ್ ನಿಮ್ಮ ಪೂರ್ತಿ ಹೆಸರನ್ನೆ (ಅವುಲ್ ಪಕೀರ್ ಜೈನುಲಾಬ್ದೀನ್ ಅಬ್ದುಲ್ ಕಲಾ೦) ಜ್ನಾಪಕವಿಟ್ಟುಕೊಳ್ಳದ ನಮ್ಮೀ ಯುವ ಜನಾ೦ಗ ನಿಮ್ಮ ಆದರ್ಶಗಳನ್ನ ನೆನಪಿಸಿಕೊ೦ಡೀತೆ? ಹೆಚ್ಚು ಅ೦ದರೆ ನಿಮ್ಮನ್ನು ಅನುಸರಿಸಿದ ಹಾಗೆ ನಿಮ್ಮ೦ತೆ ಹೇರ್ ಕಟ್ ಮಾಡಿಸಿಕೊ೦ಡಾರು???!!!!!.ನೀವು ಎಕ್ಸ್ ಅಲ್ಲ ಸರ್ ಎಕ್ಸೆಲೆ೦ಟ್......ಭಾರತ ಕ೦ಡ ಎಕ್ಸೆಲೆ೦ಟ್ ಪ್ರೆಸಿಡೆ೦ಟ್.

2020 ತು೦ಬಾ ದೂರ ಇಲ್ಲಾ ಅಲ್ವಾ ಸರ್, ಆ ಸಮಯಕ್ಕೆ ನನ್ನ ಮಗ "ಸಮ್ರುಧ್" 15 ವರ್ಷದವನಾಗಿರ್ತಾನೆ . "ಭಾರತ 2020"(ಸಮ್ರುದ್ಧ ಭಾರತ) ರ ಯುವ ಜನತೆಯ ಕಣ್ಣಲ್ಲಿ ನಿಮ್ಮ "ಪ್ರತಿಬಿ೦ಬ" ವನ್ನ ಕಾಣಲು ಕಾಯುತ್ತಿಹೆ.

ನಿಮ್ಮ,

ಅಹರ್ನಿಶಿ.
ಅಬ್ದುಲ್ ಕಲಾಂ ಜೊತೆ ಮಾತುಕತೆಗೆ ಹೊಸ ವೆಬ್ ಸೈಟ್ www.abdulkalam.com
ಹಾಗೆ "ಏನ್ ಗುರು" ಬ್ಲಾಗನ್ನೊಮ್ಮೆ ನೋಡಿ,ಕಲಾ೦ ಸರ್ ಬಗ್ಗೆ ಚನ್ನಾಗಿ ಬರೆದವ್ರೆ.

Jul 17, 2007

ಬ್ಲಾಗ್ .... ಬ್ಲಾಗ್ ......ಎಲ್ನೋಡಿ ಬ್ಲಾಗ್.


ಹೀಗೆ ಸುಮ್ಮನೇ!!!!!. ಬ್ಲಾಗ್ ಎಂಬ ಬ್ಲಾಗಿಗೆ ಕನ್ನಡ ಪದ ಯಾವುದು ಅಂತ ಯೋಚ್ನೆ ಮಾಡೋಕೆ ಶುರು ಮಾಡಿದೆ. ಏನು ಇರಬಹುದು.... ಕನ್ನಡ ಕಸ್ತೂರಿ ಡಾಟ್ ಕಾಮ್ ನಲ್ಲಿ ಕೂಡ ಸಿಗಲಿಲ್ಲ, ಬರಹ ಡಾಟ್ ಕಾಮ್ / ಕನ್ನಡ / ನಿಘಂಟು ಇಲ್ಲಿ ಕೂಡ ಸಿಗಲಿಲ್ಲ. ಎನು ಮಾಡೋದು ಅಂತ ಹಾಗೆ ಯೋಚ್ನೆ ಮಾಡ್ತಾ ಕುಳಿತಿರುವಾಗ ಹೊಳೆದ ಕೆಲವೇ ಅರ್ಥ ಗಳನ್ನ ನಿಮ್ಮ ಮುಂದೆ ಇಡ್ತಾ ಇದೀನಿ. ಬ್ಲಾಗ್ ಅಂದರೆ ಜೋಲಿಗೆ, ಸರಿನಾ ಅಂತ ಯೋಚಿಸಿದೆ. ಆದ್ರೆ ನಾವು ಜೋಳಿಗೆಯನ್ನ ಇನ್ನೊಬ್ಬರ ಹತ್ತಿರ ಬೇಡೋದಕ್ಕೆ ಉಪಯೋಗಿಸುತ್ತೇವೆ. ಇದು ಹೇಗೆ ಬ್ಲಾಗಿಗೆ ಪರ್ಯಾಯ ಪದ ಆಗೋಕೆ ಸಾಧ್ಯ ಅಂತ ಕೈ ಬಿಟ್ಟೆ. ಸಾಕಷ್ಟು ತಲೆ ಕೆಡಿಸಿಕೊಂಡ ನಂತರ ನನಗೆ ಅನಿಸಿದ್ದು ಬ್ಲಾಗಿಗೆ ಸರಿಯಾದ ಕನ್ನಡ ಪದ "ಅಕ್ಷರ ಪಾತ್ರೆ".
ನಿಮಗೆ ಏನನ್ನಿಸಿತು.ಇದೆ ವಿಷಯವನ್ನ www.sampada.net ನಲ್ಲಿ ಕೂಡ ಹಾಕಿದಿನಿ.


ಮೊಗೆದಷ್ಟು ಮುಗಿಯದ "ಅಕ್ಷಯ ಪಾತ್ರೆ" . ಈ "ಅಕ್ಷರ ಪಾತ್ರೆ"(Blog).




ಇತ್ತೀಚೆಗೆ ಬ್ಲಾಗ್......... ಬ್ಲಾಗ್......... ಎಲ್ನೋಡಿ ಬ್ಲಾಗ್.




ಗಣಕ ಕ್ರಾಂತಿ ಯೊಂದಿಗೆ ಅಕ್ಷರಕ್ರಾಂತಿ.
ನಿಮ್ಮ,
ಅಹರ್ನಿಶಿ.

Jul 14, 2007

ಶುಭಾಶಯಗಳು



ಕನ್ನಡದಲ್ಲಿ ಗ್ರೀಟಿಂಗ್ಸ್............... ನೋಡಿ ಖುಷಿ ಆಯ್ತು. ಖುಷಿ ಯಾಕೆ ಅಂದ್ರೆ ಈ ಗ್ರೀಟಿಂಗ್ ನಲ್ಲಿ ಇರೋ ಪರಿಮಳಕ್ಕೆ. ಕ್ರಿಯಾಶೀಲತೆಗೆ ಮೆಚ್ಚಬೇಕು. ಒಂದು ಟೇಬಲ್ಲು, ಅದರ ಮೇಲೆ ಅಲ್ಲೊಂದು ಇಲ್ಲೊಂದು ಮಲ್ಲಿಗೆ ಹೂ.....ಅದಕ್ಕೆ ಒಂದು ಶೀರ್ಷಿಕೆ ಸಾಹಿತ್ಯ.ಪರಿಣಾಮ ಹೃದಯ ತಟ್ಟುವ ಒಂದು ಶುಭಾಶಯ ಪತ್ರ.
ಈ ರೀತಿಯ ಹಲವಾರು ಗ್ರೀಟಿಂಗ್ಸ್ ಗಳು ನಮಗೆ www.shubhashaya.com ಗೆ ಹೋಗಿ ಹುಡುಕಿದ್ರೆ ಸಿಗುತ್ತವೆ.ಬನ್ನಿ ಹುಡುಕೋಣ. ಮೈಸೂರ್ ಮಲ್ಲಿಗೆ ಕಂಪು.
ಶುಭಾಶಯಗಳು www.shubhashaya.com ಗೆ.
ನಿಮ್ಮ,
ಅಹರ್ನಿಶಿ.



Jul 13, 2007

ಮನೆಯೆ೦ದರೆ ಹೀಗಿರಬೇಕು!!!!!..........

ಇದು ನಮ್ಮ ಮನೆ. ತುಮಕೂರಿನಲ್ಲಿದೆ.ಇದ್ರೆ ಮನೆ ಒಳಗೆ ಇರು ಇಲ್ಲಾಂದ್ರೆ ಹೊರಗಿರು(ರಸ್ತೆಯಲ್ಲಿ) ಅನ್ನೋ ಹಾಗೆ. ನಾವು ಅಂದುಕೋತಿವಿ ಇದು ನಮ್ಮ ಕನಸಿನ ಮನೆ ಅಂತ,ಆದರೆ ಯಾವತ್ತು ಮನೆ ಮುಂದೆ ಮಕ್ಕಳಿಗೆ, ನಮಗೆ ಆಟ ಆಡಲು ಅಥವಾ ಬಿಡುವಿನ ಸಮಯ ಕಳೆಯಲು ಒಂದಿಷ್ಟು ಜಾಗ ಇರಬೇಕು ಅಂತ ಯೋಚನೇನೆ ಮಾಡೋಲ್ಲ.ಇದ್ದ ಜಾಗದಲ್ಲೆಲ್ಲ ಸಿಮೆಂಟು ಇಟ್ಟಿಗೆ ಇಟ್ಟು ಬಿಡ್ತಿವಿ. ಮನೆಯೆಂದರೆ ಹೇಗಿರಬೇಕು..... ಹೀಗಿರಬೇಕು........................ ಮುಂದೆ ಓದಿ.




ಆಫ್ರಿಕಾದಲ್ಲೊ೦ದು ಮನೆ ಮಾಡಿ,ನೆರೆ ಹೊರೆಯವರಿಗೆ ಅ೦ಜಿದೊಡೆ೦ತಯ್ಯಾ..ಈ ಮನೆ ಗಾನಾ(GHANA) (ಪಶ್ಚಿಮ ಆಫ್ರಿಕಾ ದ ಒಂದು ದೇಶ) ದಲ್ಲಿದೆ.ಅಲ್ಲಿ ನನ್ನ ಗೆಳೆಯ ರಾಕೇಶ್ ಶೆಟ್ಟಿ ಇದಾನೆ. ಮನೆ ನೋಡ್ತಾ ಇದ್ರೆ ಒಳಗೆ ಹೋಗೋದೆ ಬೇಡ ಅನ್ಸುತ್ತೆ ಅಲ್ವಾ.ಕಾಂಪೌಂಡ್ ನಲ್ಲೇ ಕಾಲ ಕಳಯೋಣ ಅನ್ಸುತ್ತೆ.....ಇನ್ನೂ ಏನೇನೋ ಅನ್ಸುತ್ತೆ.. ಹುಲ್ಲು, ಗಿಡ, ಮರ ......ಮನೆಯೆಂದರೆ ಹೀಗಿರಬೇಕು ಅನಿಸುತ್ತೆ. ಮತ್ತೆ ಯಾವಾಗ್ಲದ್ರೂ ಬಿಡುವು ಮಾಡ್ಕೊಂಡ್ ಬರೀತೀನಿ.
ನಿಮ್ಮ,
ಅಹರ್ನಿಶಿ.
ಮನೆ ಮತ್ತು ಮನೆಯ ಕಾ೦ಪೌ೦ಡಿನೊಳಗೆ ಬೆಳೆಸಬಹುದಾದ ಗಿಡಗಳ ಬಗ್ಗೆ ಒ೦ದು ಸೊಗಸಾದ ಲೇಖನ ಓದಲು ಈ ಲಿ೦ಕನ್ನು ಕ್ಲಿಕ್ಕಿಸಿ.http://www.thatskannada.oneindia.in/column/gv/210707kitchen-medicine-garden.html









































































































































































































































































































































































































































































































Jul 12, 2007

ನಮ್ಮ ಮಣ್ಣು, ಕ್ಯಾಮೆರಾ ಕಣ್ಣು (ನಾ ಕಂಡೂ ಕಾಣದ ನಮ್ಮ ಕರ್ನಾಟಕ- ಕ್ಯಾಮೆರಾ ಕಣ್ಣಲ್ಲಿ).
ಪಶ್ಚಿಮಘಟ್ಟದ ಜಲಪಾತ
ಊಟಿ(ಕರ್ನಾಟಕ+ತಮಿಳುನಾಡು)
ಆರಣ್ಯ(ದಕ್ಷಿಣ ಕನ್ನಡ)
ಕಾವೇರಿ

ನಂಜನಗೂಡು
ನೇತ್ರಾವತಿ ನದಿ
ಬೆಂಗಳೂರು ಅರಮನೆ
ಮೈಸೂರು ಅರಮನೆ
ರಂಗನ ತಿಟ್ಟು

ಕಾವೇರಿ ಮತ್ತು ಉಪನದಿಗಳು
ಕೃಷ್ಣರಾಜಸಾಗರ
ಲಾಲ್‌ಬಾಗ್ ಹಾಗೂ ಗಾಜಿನ ಮನೆ
ಮಡಿಕೇರಿ
ಮೈಸೂರು ಪ್ರಾಣಿ ಸಂಗ್ರಹಾಲಯ

ಬಿಜಾಪುರ
ಸೂರ್ಯಾಸ್ತ,ಕರ್ನಾಟಕ
ನಾಗರಹೊಳೆ
ಬನ್ನೇರು ಘಟ್ಟ
ಬೇಲೂರು ಹಾಗೂ ಹಳೆಬೀಡು


ಅಬ್ಬಿ ಜಲಪಾತ
ಬೇಲೂರು
ಚಿಕ್ಕ ಮೊಗಳೂರು,ಕುದುರೆಮುಖ
ಕೂರ್ಗ್(ಮಡಿಕೇರಿ)



ಜೋಗ ಜಲಪಾತ
ಸ್ನೇಹಿತರೆ,
ಈ ಚಿತ್ರಗಳಲ್ಲಿ ಜೀವ ಇದೆ ಅಂತ ಅನಿಸುತ್ತೆ ನನಗೆ.ನೋಡ್ತಾ ಇದ್ರೆ ಅವುಗಳು ನಂ ಜೊತೆ ಮಾತಾಡ್ತಾ ಇವೆ ಅನ್ಸುತ್ತೆ.ಮೇಲೆ ನೋಡ್ತಾ ಇರೋ ಎಷ್ಟೋ ಜಾಗಗಳಿಗೆ ನಾವು ನೀವು ಎಷ್ಟೋ ಸಾರಿ ಹೋಗಿರ್ತಿವಿ ಆದರೆ ಈ ಚಿತ್ರಗಳನ್ನ ನೋಡಿದಾಗ ಮತ್ತೆ ಅಲ್ಲಿಗೆ ಹೋಗಿ ನೋಡಬೇಕು ಅಂತ ಅನ್ಸೋಲ್ವ.ಅನಿಸಿದರೆ ನಿಮ್ ಅಭಿಪ್ರಾಯ ಹೇಳಿ.
ನನ್ನ ಸ್ನೇಹಿತ ರಮೇಶ್, ಬೆಂಗಳೂರಿನಲ್ಲಿದಾನೆ ಅವನು ಕಳಿಸಿದ ಚಿತ್ರಗಳು ಇವು. ರಮೇಶ್ ತುಂಬಾ ಕೃತಜ್ಞತೆಗಳು.
ನಿಮ್ಮ,
ಅಹರ್ನಿಶಿ.
































































































































































































































Jul 11, 2007

ಕನ್ನಡ ಈ ಮೈಲ್


ಆತ್ಮೀಯರೇ,
ಕನ್ನಡದಲ್ಲಿ ಈ ಮೈಲ್ ಬರೆದಾಗ ಸಿಗೋ ಅಂತ ಸಂತೋಷ ಆನಂದ ಇಂಗ್ಲಿಷ್‌ನಲ್ಲಿ ಬರೆದಾಗ ಸಿಗೋದಿಲ್ಲ. ಅದಕ್ಕೊಂದು ಚಿಕ್ಕ ಉದಾಹರಣೆ ಕೆಳಗಿನ ಮೈಲ್. ನನ್ನ ಸ್ನೇಹಿತ ದಕ್ಷಿಣ ಕೊರಿಯದಲ್ಲಿ ಇದಾನೆ, ಮೊನ್ನೆ ಮೊನ್ನೆವರೆಗೆ ಇಂಗ್ಲಿಷ್‌ನಲ್ಲೇ ಮೈಲ್ ಮಾಡ್ತಾ ಇದ್ದೇ ಅದ್ಯಾಕೋ ಈ ಸಾರಿ ಹಟ ಮಾಡಿ ಪಟ್ಟು ಹಿಡಿದು ಕನ್ನಡದಲ್ಲೇ ಮಾಡಿದೆ.ಅಲ್ಲಿ ಅವನಿಗೆ ಆದ ಸಂತೋಷ ಮತ್ತು ಉತ್ತರ ನೋಡಿದಾಗ ಇಲ್ಲಿ ನನಗೆ ಆದ ಖುಷಿ ನಿಮ್ ಹತ್ರ ಹಂಚಿಕೋಬೇಕು ಅನಿಸ್ತು.ನೀವೂ ಏಕೆ ಪ್ರಯತ್ನ ಮಾಡಬಾರದು.

ನಿಮ್ಮ,
ಅಹರ್ನಿಶಿ.

Date:
Tue, 3 Jul 2007 13:21:32 +0100 (BST)
From:
"Mohana kumar B." View Contact Details Yahoo! DomainKeys has confirmed that this message was sent by yahoo.co.in. Learn more
Subject:
ಸಂತಸವಾಯಿತು.........
To:
"sreedhara T"

ಆತ್ಮೀಯ ಶ್ರೀ,

ನಿನ್ನ ಕನ್ನಡ ಪತ್ರ ಓದಿ ಸಂತಸವಾಯಿತು.
ಅಲ್ಲಿ ನೀವೆಲ್ಲಾ ಸೌಖ್ಯವಾಗಿರುತ್ತೀರೆಂದು ಭಾವಿಸುತ್ತೇನೆ.
ನಾನು ತಾಯ್ನಾಡಿಗೆ ಮರಳುವ ದಿನ ಸಮೀಪಿಸುತ್ತಿರುವಂತೆ, ಒಂದೊಂದಾಗಿಯೇ ಎಲ್ಲಾ ಕೆಲಸಗಳನ್ನು ಮುಗಿಸುತ್ತಿದ್ದೇನೆ. ಬರುವ ೧೭ ಅಥವಾ ೧೯ ರಂದು ನಾನು ಹೊರಡುತ್ತಿದ್ದು, ಭಾರತಕ್ಕೆ ಮರಳಿದ ನಂತರ ಕೆನಡದ ವೀಸಾಕ್ಕಾಗಿ ಅಪ್ಲೈ ಮಾಡುತ್ತೇನೆ. ಎಲ್ಲಾ ಕೆಲಸಗಳು ಸುಲಲಿತವಾಗಿ ಕೈಗೂಡಿದರೆ, ಆಗಸ್ಟ್ ಕೊನೆಯವಾರದಲ್ಲಿ (೩೦ ರಂದು) ಕೆನಡಾಕ್ಕೆ ತೆರಳುವ ನಿರ್ಧಾರ ನನ್ನದು.
ಊರಿನಲ್ಲಿ ಮನೆ ಕಟ್ಟುವ ಕೆಲಸ ಭರದಿಂದ ಸಾಗುತ್ತಿದೆ. ಜಿಟಿಜಿಟಿ ಸೋನೆ ಮಳೆಯ ಕಾರಣ ಕೆಲಸಕ್ಕೆ ಅಷ್ಟೇನೂ ತೊಂದರೆಯಾಗುತ್ತಿಲ್ಲ. ಮನೆ ಕಟ್ಟುವ ಕೆಲಸದಲ್ಲಿ ಎಲ್ಲರೂ 'ವ್ಯಸ್ತ' ವಾಗಿರುವ ಜೊತೆಗೆ, ಈಗ 'ಅಧಿಕ ಜೇಷ್ಟ' ಮತ್ತು ಮುಂದಿನ 'ಆಷಾಡ' ಸಮೀಪಿಸುತ್ತಿರುವ ಕಾರಣ, ಮದುವೆಯ ವಿಚಾರವಾಗಿ ಅಂಥಹ ಬೆಳವಣಿಗೆಗಳೇನೂ ನಡೆದಿಲ್ಲ. ವಿದ್ಯಮಾನಗಳೇನಾದರೂ ಇದ್ದಲ್ಲಿ ಖಂಡಿತಾ ತಿಳಿಸುತ್ತೇನೆ.


'ಬರಬಾರದೇ ಪ್ರಿಯತಮೆ ಬಾಳಿಗೆ...
ನೀ ಬಾರದೇ ಮನಸು ಬರಿದಾಗಿದೆ........'

ಬಿಡುವಾದಾಗ ಮತ್ತೊಮ್ಮೆ ಬರೆಯುತ್ತೇನೆ.......



ನಿಮಗೆ ಶುಭವಾಗಲಿ,

ಸಪ್ರೇಮದಿಂದ,

ಮೋಹನ

sreedhara T wrote:
ಮೋಹನ,
ಹೇಗಿದಿಯ,ಬಹಳ ದಿನಗಳಾಯ್ತು ನಿನ್ನ ಮೈಲ್ ನೋಡಿ.

ಏನು ಸಮಾಚಾರ.ಯಾವಾಗ ಭಾರತಕ್ಕೆ ಹೋಗ್ತಿಯ .

ನಿನ್ನ ಕೆಲಸ ಎಲ್ಲ ಮೂಗುದ್ವಾ.ಹಾಗೂ ಕೆನಡಾ ವೀಸಾ ಬಂತಾ.

ಪಾಲಾಕ್ಷ ಹೇಗಿದಾನೆ.ಅವನಿಗೆ ನನ್ನ ವಂದನೆಗಳನ್ನು ತಿಳಿಸು.

ದಯವಿಟ್ಟು ಮರೆಯದೇ ಬೇಗ ಉತ್ತರ ಬರೆ.

ಭಾರತ ದಲ್ಲಿ ಮುಂಗಾರು ಮಳೆಯೊಂದಿಗೆ ಎಲ್ಲ ನಿನ್ನ ಕಾಯ್ತಾ ಇದಾರೆ ಅನ್ಸುತ್ತೆ.

ಮುಂಗಾರು ಮಳೆಯೇ ಏನು ನಿನ್ನ ಹನಿಗಳ ಲೀಲೆ.

ಸ್ವಾತೀ ಮುತ್ತಿನ ಮಳೆ ಹನಿ ಮೆಲ್ಲ ಮೆಲ್ಲನೇ ದರೆಗಿಳಿಯೇ.

ಕನ್ನಡ ದಲ್ಲಿ ಮೈಲ್ ಮಾಡಿ ಅದರ ಖೂಷಿನೆ ಬೇರೆ ನೋಡಿ.

ಪ್ರೀತಿಯಿಂದ,
ಶ್ರೀ.

Jul 10, 2007

ಮೊದಲ ಹೆಜ್ಜೆ


Shafik Merali Beach............ Mwanza(After Nyegezi)
ಮೊವಂಜ಼ ಕನ್ನಡಿಗರಿಗೆ ನನ್ನ ವಂದನೆಗಳು.
ಬಹಳ ದಿನಗಳಿಂದ ನನ್ನ ಮನಸ್ಸಿನಲ್ಲೇ ಅಂದು ಕೊಳ್ಲೋದು ಹಾಗೆ ಸುಮ್ಮನಾಗೋದು.
ಕೊನೆಗೂ ನನ್ನ ಬ್ಲಾಗ್ ಶುರು ಮಾಡಿ ನಿಮಗೆ ಮೊದಲನೆ ತೊದಲು ನುಡಿಗಳೊಂದಿಗೆ ಪ್ರಾರಂಭ ಮಾಡಿದ್ದೇನೆ.
ಮೇಲೆ ನೋಡ್ತಾ ಇರೋ ಜಾಗ ತುಂಬಾ ಚನಾಗಿದೆ.
ದಯವಿಟ್ಟು ಹೋಗಿ ಬನ್ನಿ.
ಕ್ವಿಲ್‌ ಪ್ಯಾಡ್ ಬಳಸಿ ಕನ್ನಡದಲ್ಲಿ ಬರೀತ ಇದೀನಿ ಸ್ವಲ್ಪ ಕಷ್ಟ ಆಗ್ತಾ ಇದೆ.
ಬೇರೆ ಯಾವ ರೀತಿ ಚನ್ನಾಗಿ ಬರೆಯ ಬಹುದು ಅಂತ ಯಾರಿಗಾದ್ರೂ ಗೊತ್ತಿದ್ರೆ ದಯವಿಟ್ಟು ತಿಳಿಸಿ.
ನಿಮ್ಮ,
ಅಹರ್ನಿಶಿ.

Jul 9, 2007

ಸುವರ್ಣ ಕನ್ನಡ ಹಬ್ಬ


Mwanza Attractions..! Lovely beach at the Shores of Great Lake Victoria......!


"ಸುವರ್ಣ ಕನ್ನಡ ಹಬ್ಬದ ಶುಭಾಶಯಗಳು"
ಮತ್ತೊಮ್ಮೆ ವಿವರವಾಗಿ ಬರೀತೀನಿ.


ನಿಮ್ಮ,


ಅಹರ್ನಿಶಿ.