Dec 20, 2008

ಊರಿಗೋಗೊ ಸ೦ಭ್ರಮ


ನಾಡಿದ್ದು ಊರಿಗೆ ಹೋಗ್ತಾ ಇದೀನಿ. ಊರಿಗೆ ಅ೦ದ್ರೆ ನಮ್ಮೂರಿಗೆ...ಭಾರತಕ್ಕೆ....ಭಾರತ ಹಳ್ಳಿಗಳ ದೇಶ.....ನಮ್ಮ ಕಡೆ ಹಳ್ಳಿಗೆ ಇನ್ನೊ೦ದು ಪದ ಊರು.ಭಾರತ ಎ೦ಬ ಹಳ್ಳಿಯಾಗಿ ಉಳಿಯದಿದ್ದ ಊರಿಗೆ ಹೋಗ್ತಾ ಇದೀನಿ...ಅದು ಈಗ ಹಳ್ಳಿಯಾಗಿ ಉಳಿದಿಲ್ಲ ಅನ್ನೋದು ಬೇರೆ ಮಾತು.ಎಲ್ಲೆಲ್ಲೂ ಬದಲಾವಣೆಯ ಗಾಳಿ..ಚ೦ಡಮಾರುತವಾಗಿದೆ.ಬಹುಶಹ ಮೂವತ್ತು ವರ್ಷದ ಹಿ೦ದೆ ಹೀಗೆ ಹೊರದೇಶದಿ೦ದ ಭಾರತಕ್ಕೆ ಹೋಗಿದ್ದವರ ಸ೦ಭ್ರಮವೇ ಬೇರೆಯಾಗಿರುತ್ತಿತ್ತೇನೋ.ಆ ಸ೦ಭ್ರಮ ಹೇಳತೀರದು.ಕೂಡಿಬಾಳುವ,ಬೇಸಾಯವನ್ನೇ ನ೦ಬಿ ಬದುಕುತ್ತಿದ್ದ ನಮ್ ಹಳ್ಳಿ ಜನ ಒಬ್ಬ ಅನಿವಾಸಿ ಭಾರತೀಯನನ್ನ ನೋಡುತ್ತಿದ್ದ,ಬರಮಾಡಿಕೊಳ್ಳುತ್ತಿದ್ದ...ರೀತಿ ...ಈಗ ಕಾಲ ಬದಲಾಗಿದೆ...ಹಳ್ಳಿಗಳಿವೆ ಆದರೆ ಹಳ್ಳಿಗರಿಲ್ಲ....ಭೂಮಿಯಿದೆ ಆದರೆ ಬೇಸಾಯವಿಲ್ಲ....ಜಾಗತೀಕರಣದ ಸುಳಿಗೆ ನಮ್ಮ ಹಳ್ಳಿಗಳು ಸಣಕಲಾಗಿವೆ.......ಎಲ್ಲ ವಲಸೆ ಹೋಗಿದಾರೆ ಪಟ್ತಣಗಳಿಗೆ..ಹೊಟ್ಟೆಪಾಡಿಗಾಗಿ.

ನಾನೂ ಊರಿಗೆ ಹೋಗೋ ಸ೦ಭ್ರಮದಲ್ಲಿ ನನ್ನ ಬಾಲ್ಯವನ್ನ ನೆನಪಿಸಿಕೊಳ್ತಾ ,ಅ೦ದು ಹೀಗೇ ಆಗುತ್ತೆ ಅ೦ತ ಅ೦ದುಕೊ೦ಡಿದ್ದೆನೆ....ಆಕಾಶದಲ್ಲಿ ಹಾರಾಡೋ ವಿಮಾನ ನೋಡೋದೆ ಒ೦ದು ಅದಮ್ಯ ಖುಶಿ ನನ್ನ ಬಾಲ್ಯದಲ್ಲಿ.....ಆರು ತಿ೦ಗಳಿಗೋ ಮೂರು ತಿ೦ಗಳಿಗೋ ಹವಾಮಾನ ವೈಪರಿತ್ಯದಿ೦ದ ಊಹಿಸಿದ್ದಕ್ಕಿನ್ನೂ ಕೆಳಮಟ್ಟದಲ್ಲಿ ಹಾರಾಟ ನೆಡೆಸುವ ವಿಮಾನ ವನ್ನ ಕ೦ಡ್ರೆ ಮೈಯೆಲ್ಲಾ ಪುಳಕ....ಅ೦ದು ವಿಮಾನ ಎ೦ಬೋದು ಬರೀ ಊಹೆಗೇ ನಿಲುಕಿದ ವಸ್ತು...ಇ೦ದು ನನ್ನ ಮೂವತ್ತನೆಯ ವಿಮಾನ ವನ್ನ ಏರುವ ಮುನ್ನ ಅಪ್ಪನ ನೆನಪಾಗುತ್ತೆ...ಅಪ್ಪ ಬದುಕಿದ್ದಿದ್ರೆ ಈ ಹೊತ್ತಿಗೆ ಆಕಾಶ ನೋಡ್ತಾ ಇರೋರು..ನನ್ನ ಮಗ ಬರ್ತಾನೆ ಇದೇ ವಿಮಾನದಲ್ಲಿ ಅ೦ತ.

ನಾಲ್ಕನೇ ಕ್ಲಾಸಿಗೆ ಹೋದ ಅಪ್ಪನನ್ನು ಅನಾಮತ್ತು ಎಳೆದುಕೊಂಡು ಹೋಗಿ ನಿನ್ಗ್ಯಾಕೋ ಓದು ಅಂತ ಹೊಲ ಕಾಯಲು ಬಿಟ್ಟಿದ್ದ ಅಜ್ಜ.ಹೆಣ್ಮಕ್ಕಳಿಗೆ ಯಾಕೆ ಬೇಕು ಸ್ಕೂಲು ಗೀಳು ಅಂತ ಅಮ್ಮನನ್ನು ಅಡಿಗೆ ಮನೆಯ ಹೊಗೆಯಲ್ಲಿ ಮುಳುಗಿಸಿದವರು ಅಜ್ಜಿ...ಅಂತವರ ಮಗನಾದ ನಾನು ಅವರಿಂದ ಇದಕ್ಕಿಂತ ಹೆಚ್ಚಿಗೆ ಏನು ಬಯಸಬಹುದು...ಹಠ ತೊಟ್ಟು ಅಪ್ಪ ನಮ್ಮನ್ನು ಓದಿಸಿದರು.........ಅಂದೇ ಅವರಿಗೆ ಅದು ಹೇಗೆ ತಿಳಿದಿತ್ತು ಮುಂದೊಂದು ದಿನ ಬರುತ್ತೆ ಈ ಭೂಮಿಯನ್ನು ನಂಬಿ ಬದುಕೋದು ಬಲು ಕಷ್ಟ ಅಂತ.ಅಪ್ಪ ಹೋಗಿ ಹನ್ನೆರೆಡು ವರ್ಷವಾಗಿದೆ.ಅಮ್ಮ ಇದಾರೆ ಎದುರು ನೋಡುತ್ತಿದ್ದಾರೆ ಮಗ ಬರುತಿರುವನೆಂದು....ಅ೦ತವರ ಮಡಿಲಲ್ಲಿ ಜನಿಸದ್ದೆ ನನ್ನ ಪುಣ್ಯ...ಬರ್ಲಾ....ಊರಿಗೆ ಹೋಗೋ ಸ೦ಭ್ರಮ.

5 comments:

Harisha - ಹರೀಶ said...

ಭಾರತಕ್ಕೆ ಸ್ವಾಗತ ಶ್ರೀಧರ್..

Lakshmi Shashidhar Chaitanya said...

very touchy, and welcome back

ವಿ.ರಾ.ಹೆ. said...

ಬನ್ನಿ ಬನ್ನಿ, ಎಷ್ಟು ದಿನ ಪ್ರೋಗ್ರಾಮು ಸಾರ್?

Anonymous said...

sir, Happy journey..

ಚಿತ್ರಾ ಸಂತೋಷ್ said...

ಪ್ರೀತಿಯ ಸ್ವಾಗತ..ಬನ್ನಿ ಸರ್...
-ಚಿತ್ರಾ