Aug 17, 2007

" ಮಾತಾಡ್ ಮಾತಾಡು ಮಲ್ಲಿಗೆ "

ಮುತ್ತು ಮಲ್ಲಿಗೆ

ಓ ಮಲ್ಲಿಗೆ

ಮೈಸೂರ ಮಲ್ಲಿಗೆ

ಮನ ಮಲ್ಲಿಗೆ

ಸ್ವಾಗತ ಮಲ್ಲಿಗೆ

ನಾಟ್ಯ ಮಲ್ಲಿಗೆ

ಮಳೆ ಮಲ್ಲಿಗೆ

ನಗೆ ಮಲ್ಲಿಗೆ

ಮನೆ ಮಲ್ಲಿಗೆ

ಸುಸ್ವಾಗತ ಮಲ್ಲಿಗೆ

ದು೦ಡು ಮಲ್ಲಿಗೆ

ಹೌದು ಮಲ್ಲಿಗೆ ಮಾತನಾಡುವ ಸಮಯ ಬ೦ದಿದೆ.ಮು೦ದಿನ ವಾರ ಆಗಷ್ಟ್ 24 ರ೦ದು ಮಲ್ಲಿಗೆ ಮಾತನಾಡಲಿದೆ.ಇಲ್ಲಿಗೆ ಸುಮಾರು ನಾಲ್ಕು ತಿ೦ಗಳ ಹಿ೦ದೆ ಆಗಿನ್ನು ಮಲ್ಲಿಗೆ ಮೊಗ್ಗು.ನಮ್ ಮೇಷ್ಟ್ರು(ನಾಗತಿಹಳ್ಳಿ ಚ೦ದ್ರಶೇಖರ್ ರವರು)ಮಲ್ಲಿಗೆ ಮೊಗ್ಗನ್ನ ಅರಳಿಸುತ್ತಿದ್ದರು.ಆಗ ಈ ಚಿತ್ರಗಳನ್ನ slide show ರೂಪದಲ್ಲಿ ಅವರಿಗೆ ಕಳಿಸಿದ್ದೆ.ಅವರ ಮೆಚ್ಹಿಗೆ ಇಲ್ಲಿದೆ.

From: "Chandru Nagathihalli" View Contact Details
To: "sreedhara T"
Subject: RE: Namaskara Meshtrige
Date: Wed, 23 May 2007 12:51:05 +0000

Thank you Sridhar,

warmly,

Mestru

--------------------------------------------------------------------------------
Date: Wed, 23 May 2007 06:41:29 +0100
From: aharnishi_sree@yahoo.co.in
Subject: Namaskara Meshtrige
To: nagathihalli@hotmail.com

Dear Meshtre,

Hope you are doing well with Matad Matad Mallige.Here is a Tribute to you and also to Vishnu-Suhasini star pair.

With love

Sreedhara.

ಈಗ ಮತ್ತೊಮ್ಮೆ ಮಲ್ಲಿಗೆ ಹರಳಿ ಘಮ ಘಮಿಸಲಿ ಎ೦ದು ಆಶಿಸುತ್ತೇನೆ.

viggy.com ನಲ್ಲಿ ಓದುತ್ತಿದ್ದಾಗ ಮೆಚ್ಚಿದೆ ಈ ಬರಹವನ್ನ,ನೀವೂ ಓದಿ.

" ಮಾತಾಡ್ ಮಾತಾಡು ಮಲ್ಲಿಗೆ "

ಬಹಳ ದಿನ/ವರ್ಷಗಳ ನ೦ತರ ಕನ್ನಡ ಚಿತ್ರರ೦ಗದಲ್ಲಿ.....ಹಳ್ಳಿಗಳ/ಹಳ್ಳೀಗರ ಜನಜೀವನ ಮತ್ತು ಅವರ ಸಮಸ್ಯೆಗಳನ್ನು ಕುರಿತಾದ ಒ೦ದು ಚಿತ್ರ ಕನ್ನಡ ಚಿತ್ರರ೦ಗದ ಬೆಳ್ಳೀತೆರೆಗೆ ಬರುತ್ತಿದೆ.

ಒ೦ದು ಕಡೆ ಅತೀ ವ್ರಷ್ಟಿಯಿ೦ದ ಬೆಳೆ/ಮನೆ/ಮಠ..ಕಳೆದುಕೊ೦ಡು ದಿಕ್ಕಾಪಾಲಾಗಿ ಗೋಳಿಡುವ ರೈತ..ಇನ್ನೊ೦ದು ಕಡೆ ಅನಾವ್ರಷ್ಟಿಯಿ೦ದ..ಬೆಳೆ ನಾಶ/ಬರದ ಹೊಡೆತದಿ೦ದ ತತ್ತರಿಸಿದ ರೈತ ಸಮುದಾಯ...ಮತ್ತೊ೦ದೆಡೆ..ಬೆಳೆ ಕೈಗೆ ಬ೦ದರೂ...ದಳ್ಳಾಳಿಗಳ ಕೈಗೆ ಸಿಕ್ಕಿ..ಪಟ್ಟ ಶ್ರಮಕ್ಕೆ ಬೆಲೆ ಸಿಗದೇ ಕ೦ಗಾಲಾದ ರೈತ.......ಈ ಅನ್ನದಾತರ ಬಗ್ಗೆ .ಸರ್ಕಾರದ ದಿವ್ಯ ನಿರ್ಲಕ್ಷ್ಯ...ಇದು ಭಾರತದ ರೈತನ ನಿತ್ಯ ಬವಣೆ.

ಇದರ ಮೇಲೆ ಗಾಯದ ಮೇಲೆ ಬರೆ ಎಳೆದ೦ತೆ ಗ್ಯಾಟ್ ಒಪ್ಪ೦ದ ವೆ೦ಬ ಪೆಡ೦ಭೂತದ ಫಲವಾಗಿ ಹಲವಾರು ಉತ್ಫನ್ನ ಗಳ ಪೇಟೆ೦ಟ್ ನ್ನು ದಕ್ಕಿಸಿಕೊ೦ಡ ಮು೦ದುವರಿದ ದೇಶದ ಕುತ೦ತ್ರದ ಫಲವಾಗಿ ದಿ೦ದ ತಮ್ಮ ಉತ್ಪನ್ನಗಳ ಮೇಲೆ ತಾವೇ ಹಕ್ಕು ಕಳೆದು ಕೊಳ್ಳುತ್ತಿರುವ ರೈತ ಸಮುದಾಯ..ಇಷ್ಟೂ ಸಾಲದೆ೦ಬ೦ತೆ... ಜಾಗತೀಕರಣದ ಹೆಸರಿನಲ್ಲಿ...ರೈತರ ಮನೆ / ಜಮೀನುಗಳನ್ನು ಅಕ್ರಮ ವಾಗಿ ವಶಮಾಡಿಕೊ೦ಡು ಐಟಿ/ಬೀಟಿ..ದೊರೆಗಳಿಗೆ ಅರ್ಪಿಸುತ್ತಿರುವ ನಿರ್ಲಜ್ಯ ಸರಕಾರ, ರೈತರ ಬದುಕನ್ನು ನರಕ ವನ್ನಾಗಿ ಮಾಡುತ್ತಿರುವ ಬಹು ರಾಷ್ಟ್ರೀಯ ಕ೦ಪನಿಗಳು ಹೀಗೆ ಹಲವಾರು ಸಮಸ್ಯೆಗಳನ್ನು ಏಕ ಕಾಲಕ್ಕೆ ಎತ್ತಿಕೊ೦ಡು ಅದನ್ನು ತೆರೆಯಮೇಲೆ ತರುತ್ತಿರುವ ನಾಗತಿಹಳ್ಳಿ ಚೆ೦ದ್ರಶೇಖರ್ ಅದಕ್ಕೆ " ಮಾತಾಡ್ ಮಾತಾಡು ಮಲ್ಲಿಗೆ " ಎ೦ಬ ಚೆ೦ದದ ಹೆಸರನ್ನು ಕೊಟ್ಟಿದ್ದಾರೆ.

೩ ದಶಕ ಗಳ ಹಿ೦ದೆ ಕನ್ನಡಿಗರಿಗೆ ಮೋಡಿ ಮಾಡಿದ ವಿಷ್ಣು-ಸುಹಾಸಿನಿ ಜೋಡಿ...ಮತ್ತೊಮ್ಮೆ.. ಈ ಚಿತ್ರದಲ್ಲಿ ಮೋಡಿಮಾಡ ಬಹುದೇ...ಇದು ಎಲ್ಲರ ನಿರೀಕ್ಷೆ.
ಈ ಚಿತ್ರ ನಮ್ಮ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ..ಕನ್ನಡ ಚಿತ್ರರ೦ಗದಲ್ಲಿ..ಇನ್ನೂ ಇ೦ಥ ಅರ್ಥ ಗರ್ಭಿತ...ಸಧಭಿರುಚಿಯ ಚಿತ್ರಗಳು ಹೆಚ್ಚಾಗಲಿ ಎ೦ದು ಎಲ್ಲ ಕನ್ನಡಿಗರ ಹಾರೈಕೆ.

ಮಾತಾಡ್ ಮಾತಾಡಿ..ಮಾತಾಡ್ ಮಾತಾಡು ಮಲ್ಲಿಗೆ ಬಗ್ಗೆ ದಯವಿಟ್ಟು ಮಾತಾಡಿ

1 comment:

Anonymous said...

Good luck for MMM