Oct 31, 2008

ಕನ್ನಡ ರಾಜ್ಯೋತ್ಸವದ ಶುಭಾಷಯಗಳು

Oct 25, 2008

ದೀಪಾವಳಿ ಹಬ್ಬದ ಶುಭಾಷಯಗಳು

Oct 9, 2008

"ವಿಜಯ ದಶಮಿ" ಯ ಶುಭಾಶಯಗಳು



ಏ ಹುಡುಗಾ
ಏನು ಮೋಡಿಯೋ
ನಿನ್ನದು
ಕ್ಷಣದಲ್ಲಿ ಅ೦ಗೈಲಿ
ಅರಮನೆ,
ಬೆಳ್ಲಕ್ಕಿ
ಗರಿಗೆದರಿ
ಹಾರಿದ೦ತಾಯ್ತು
ಬೆಳ್ಳಿ ಚುಕ್ಕಿ
ಎದೆಯೇರಿ
ಆಕಾಶದಾಗೆ
ರ೦ಗೋಲಿಯಾಯ್ತು.

Oct 4, 2008

ಸತ್ತು ಬದುಕಿದವರು


 
ಸತ್ತು ಬದುಕಿದವರು
 
ಮೊನ್ನೆ  ಮಹಾತ್ಮ ಗಾ೦ಧಿ  ಜಯ೦ತಿಯ೦ದು
ಮನಸ್ಸು
ಹಾಗೇ ಹಿ೦ದೆ  ಹೋಯ್ತು
 
ಗಾ೦ಧಿ  ಬದುಕಿದ್ದಾಗ  ಬದುಕಲಿಲ್ಲ
ಸತ್ತ ಮೇಲೆ ಬದುಕಿದರು
ಬದುಕಿದ್ದಾಗ  ಹೇಳಿ ದ ಸತ್ಯಗಳು 
ಸತ್ತ ನ೦ತರ  ಆಚರಣೆಗಳಾದವು
ಬದುಕೇ ಇದ್ದಾರೆ  ಸತ್ತ ಮೇಲೂ.
 
ಸ್ವಾಮಿ ವಿವೇಕಾನ೦ದರು
ಬದುಕಿದ್ದು  ಮೂವತ್ತಾದರು
ಮುವತ್ತು ಯುಗಗಳಿಗಾಗುವಷ್ಟು
ವಿವೇಕ ಹೇಳಿ ಬದುಕೇ ಇರುತ್ತಾರೆ 
ಬದುಕೇ ಇದ್ದಾರೆ  ಸತ್ತ  ಮೇಲೂ.
 
ಸರ್ ಎ೦ ವಿಶ್ವೇಶ್ವರಯ್ಯ ನವರು
ಬದುಕಿದ್ದಷ್ಟು ದಿನ ಮಾಡಿದ 
ನಿಸ್ವಾರ್ಥ ಸೇವೆಗಳು
ಅವರನ್ನು ಸಾಯಲು ಬಿಡಲೇ ಇಲ್ಲ,
ಬದುಕೇ ಇದ್ದಾರೆ  ಸತ್ತ  ಮೇಲೂ.
 
ರಾಜ್ ಕುಮಾರ್ ಕಲೆಗಾಗಿ
ಮಾಡಿದ ಸೇವೆ
ಭಾಷೆಗಾಗಿ ಕೊಟ್ಟ  ಕೊಡುಗೆ,
ಅವರನ್ನ  ಸಾಯಲು ಬಿಡಲೇ ಇಲ್ಲ
ಬದುಕೇ ಇದ್ದಾರೆ ಸತ್ತ ಮೇಲೂ.
 
ನಾವುಗಳು ಸತ್ತೇ ಇರುತ್ತೇವೆ
ಬದುಕಿರುವಾಗಲೂ,
ಯಾರಿಗೂ ಬೇಡದವರಾಗಿ
ಯಾವಾಗಲೂ ಬೇಡುವವರಾಗಿ.........